ಬಳ್ಳಾರಿ: ದೇಶದಾದ್ಯಂತ ಲೋಕಸಭೆ ಚುನಾವಣೆ ರಂಗೇರಿದೆ.ಆದರೆ ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ಪ್ರಸ್ತುತ ಇದೇ ತಿಂಗಳು ನಡೆಯಲಿರುವ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಕಾಂಗ್ರೇಸ್ ಸದಸ್ಯರ ಸಂಖ್ಯೆ ಸ್ಪಷ್ಟ ಬಹುಮತವಿದೆ.ಆದರೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವುದರಿಂದ, ಕಾರ್ಪೂರೇಟರ್ಗಳ ಒಲೈಕೆಗೆ ಗಿಫ್ಟ್ ಸೇರಿದಂತೆ ಇತರೆ ಕೊಡುಗೆಗಳ ನೀಡುವಲ್ಲಿ ಆಕಾಂಕ್ಷಿಗಳು ನಿರತರಾಗಿದ್ದಾರೆ. ಈ ಕುರಿತು ಒಂದು ಸ್ಟೋರಿ ನೋಡೋಣ ಬನ್ನಿ..
ಗಣಿನಾಡು ಬಳ್ಳಾರಿಯಲ್ಲಿ ಬೇಸಿಗೆಯ ಬಿಸಿಲುಗಿಂತ ಚುನಾವಣೆ ಕಾವು ಹೆಚ್ಚಾಗಿದೆ. ಒಂದು ಕಡೆ ಲೋಕಸಭೆ ಚುನಾವಣೆಯಾದರೇ, ಮತ್ತೋಂದು ಕಡೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಕುತೂಹಲ ಕೆರಳಿಸಿದೆ. ಇದೇ ತಿಂಗಳು 28ನೇ ತಾರೀಖಿಗೆ ನಡೆಯಲಿರುವ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಪಾಲಿಕೆಯು 39 ಸದಸ್ಯರ ಸಂಖ್ಯಾ ಬಲವನ್ನು ಹೊಂದಿದೆ.ಈ ಬಾರಿ ಮೇಯರ್ ಜನರ್ (ಪುರುಷ) ಕ್ಯಾಟಗಿರಿ ಆದರೆ ಉಪ ಮೇಯರ್ ಒಬಿಸಿ (ಮಹಿಳೆ)ಮೀಸಲಾಗಿದೆ. ಜನರ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಪೂರೇಟರ್ಗಳು ಗೆದ್ದಿರುವುದರಿಂದ ಆಕಾಂಕ್ಷೀಗಳ ಸಂಖ್ಯೆ ಹೆಚ್ಚಿದೆ. ಒಟ್ಟು 39 ಕಾರ್ಪೂರೇಟರ್ಗಳು ಇದ್ದು ಸಂಖ್ಯಾ ಬಲ ಹೀಗಿದೆ.
ಸದಸ್ಯರ ಸಂಖ್ಯಾ ಬಲ :-
ಕಾಂಗ್ರೇಸ್ – 21,
ಕಾಂಗ್ರೇಸ್ ಬೆಂಬಲಿತ ಪಕ್ಷೇತರರು – 5,
ಬಳ್ಳಾರಿ ನಗರ ಎಂಎಲ್ ಎ -1,
ಬಳ್ಳಾರಿ ಗ್ರಾಮಾಂತರ ಎಂಎಲ್ ಎ -1,
ರಾಜ್ಯಸಭಾ ಸದಸ್ಯರು -1,
ಒಟ್ಟು ಕಾಂಗ್ರೇಸ್ ಬಲ = 29.
ಬಿಜೆಪಿ – 13
ಎಂಎಲ್ ಸಿ -1,
ಒಟ್ಟು ಬಿಜೆಪಿ ಬಲ = 14.
ಪ್ರಸ್ತುತ ಮೇಯರ್ ರೇಸ್ ನಲ್ಲಿ ಎಂ.ಪ್ರಭಂಜನ್ ಕುಮಾರ್, ಪಿ.ಗಾದೆಪ್ಪ, ಮುಲ್ಲಂಗಿ ನಂದೀಶ್, ಪೇರಂ ವಿವೇಕ್ ನಡುವೆ ತೀವ್ರವಾದ ಸ್ಪರ್ಧೆ ಏರ್ಪಟ್ಟಿದೆ. ಈ ಮೇಲ್ಕಂಡ ಆಕಾಂಕ್ಷಿಗಳು ಈಗಾಗಲೇ ಇತರೆ ಮಹಾನಗರ ಪಾಲಿಕೆಯ ಸದಸ್ಯರನ್ನು ತಮ್ಮ ಪರವಾಗಿ ಸೆಳೆಯಲು ವಿವಿಧ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ. ಮುಖ್ಯವಾಗಿ ಗಿಫ್ಟ್ ಮಾದರಿಯಲ್ಲಿ ಬೆಳ್ಳಿ ತಟ್ಟೆ , ಬಂಗಾರ ಹಸ್ತದ ಗುರುತು, ರೇಷ್ಮೆ ಸೀರೆ, ರೇಷ್ಮೆ ಪಂಜೆ ಸೇರಿದಂತೆ ಇತರೆ ವಸ್ತುಗಳನ್ನು ಕಾರ್ಪೂರೇಟರ್ಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಎಂ.ಪ್ರಭಂಜನ್ ಕುಮಾರ್ ಮತ್ತು ಮುಲ್ಲಂಗಿ ನಂದೀಶ್ ಅವರು ಮಾಡುತ್ತಿದ್ದಾರೆ.
ಈ ಹಿಂದಿನ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲೂ ಇದೇ ರೀತಿಯ ಸಮಸ್ಯೆ ತಲೆದುರಿತ್ತು. ಆಗಾ ರಾಜ್ಯ ಕಾಂಗ್ರೇಸ್ ನಾಯಕರಾದ ಎಚ್.ಎಂ.ರೇವಣ್ಣ ಮತ್ತು ವೆಂಕಟೇಶ್ ಸೇರಿದಂತೆ ಹಾಗೂ ಸಚಿವ ನಾಗೇಂದ್ರ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ನಗರ ಶಾಸಕ ಎನ್. ಭರತ್ ರೆಡ್ಡಿ ಅವರ ಜೊತೆ ಗೂಡಿ ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು. ಆಕಾಂಕ್ಷಿಗಳು ಎಷ್ಟೇ ಇದ್ದರು, ಈ ಬಾರಿಯು ಒಮ್ಮತದಿಂದ ಆಯ್ಕೆ ಮಾಡುವುದು ಗ್ಯಾರಂಟಿ ಆದರೆ ಬಿಜೆಪಿ ಮತ್ತು ಬಂಡಾಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೇಸ್ ಮೂಲಗಳಿಂದ ಕೇಳಿ ಬರುತ್ತಿದೆ.
ಚನ್ನಕೇಶವ ಕಂಪ್ಲಿ: ಬಳ್ಳಾರಿ