ಕಲಬುರಗಿ: ಅಯೋಧ್ಯೆಯಲ್ಲಿ ಮತ್ತೆ ಪ್ರಭು ಶ್ರೀರಾಮ ಚಂದ್ರನ ಆಗಮನವಾದ ಕಾರಣ ಸಂಜೆ ಎಲ್ಲರೂ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆಕೊಟ್ಟ ಹಿನ್ನಲೆ ಕಲಬುರಗಿಯಲ್ಲಿ ದೀಪೋತ್ಸವ ಜೋರಾಗಿತ್ತು. ಇಡೀ ನಗರದ ಎಲ್ಲೆಡೆ ದೀಪಗಳು ಜಗಮಗಿಸುತಿದ್ದವು.
ಇದೇವೇಳೆ ಮಹಾದಾಸೋಹಿ ಶರಣನ ಗುಡಿ ಅಂಗಳದಲ್ಲಿ ಬೆಳಕಿನ ಬಾಣ ಬಿರುಸುಗಳು ಆಕಾಶಕ್ಕೆ ಮುತ್ತಿಕ್ಕುತ್ತಿದ್ದವು. ಪ್ರಭು ಶ್ರೀರಾಮನ ಭವ್ಯ ಮೂರ್ತಿಯು ನೋಡುಗರ ಕಣ್ಮನ ಸೆಳೆಯುತಿತ್ತು.. ಮಾತ್ರವಲ್ಲ ರಾಮ ಸೀತೆ ಲಕ್ಷ್ಮಣ ಈ ಮೂವರ ವೇಷಾಧಾರಿಗಳು ರಾಮೋತ್ಸವಕ್ಕೆ ಮೆರಗು ತಂದಿದ್ದು ಎದ್ದು ಕಾಣುತಿತ್ತು..