ರಾಮೋಜಿ ಫಿಲ್ಮ್ ಸಿಟಿ ನಿರ್ಮಿಸಿದ ರಾಮೋಜಿ ರಾವ್ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮೋಜಿ ರಾವ್ ಇಂದು ಮುಂಜಾನೆ 4:50ಕ್ಕೆ ಕೊನೆಯುಸಿರೆಳೆದಿದ್ದಾರೆ.
ಪಾರ್ಥಿವ ಶರೀರವನ್ನು ರಾಮೋಜಿ ಫಿಲಂ ಸಿಟಿಗೆ ಸ್ಥಳಾಂತರಿಸಲಾಗಿದೆ. ರಾಮೋಜಿ ರಾವ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈನಾಡು ಮತ್ತು ರಾಮೋಜಿ ಫಿಲ್ಮ್ ಸಿಟಿಯ ಸಂಸ್ಥಾಪಕ ರಾಮೋಜಿ ರಾವ್ ನಿಧನರಾದರು ಟಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ತುಂಬಲಾರದ ನಷ್ಟವಾಗಿದೆ. ಜೂನಿಯರ್ ಎನ್ಟಿಆರ್, ಚಿರಂಜೀವಿ, ಮನೋಜ್ ಮಂಚು, ಸುಧೀರ್ ಬಾಬು ಸೇರಿದಂತೆ ಹಲವು ಸೆಲೆಬ್ರಿಟಿಗಳು ರಾಮೋಜಿ ರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ರು.
ಶ್ರೀ ರಾಮೋಜಿ ರಾವ್ ಅವರಂತಹ ದಾರ್ಶನಿಕರು ಮಿಲಿಯನ್ನಲ್ಲಿ ಒಬ್ಬರು. ಉದ್ಯಮಿ ಮತ್ತು ಭಾರತೀಯ ಚಿತ್ರರಂಗದ ದಿಗ್ಗಜ, ಅವರು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿ ತುಂಬಾ ದುಃಖಕರವಾಗಿದೆ. ‘ನಿನ್ನು ಚೂಡಾನಿ’ ಚಿತ್ರದ ಮೂಲಕ ನಾನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ ನೆನಪುಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜೂನಿಯರ್ ಎನ್ಟಿಆರ್ ಪೋಸ್ಟ್ ಮಾಡಿದ್ದಾರೆ.
ನವೆಂಬರ್ 16, 1936 ರಂದು ಕೃಷ್ಣ ಜಿಲ್ಲೆಯ ಪೆದಪರುಪುಡಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದವರು ರಾಮೋಜಿ ರಾವ್. ರಾಮೋಜಿ ರಾವ್ ಅವರ ತಾತ ತೀರಿಕೊಂಡ 13 ದಿನಗಳ ನಂತರ ಅವರು ಜನಿಸಿದ ಕಾರಣ, ಅವರ ನೆನಪಿಗಾಗಿ ಅವರ ಪೋಷಕರು ರಾಮಯ್ಯ ಎಂದು ಹೆಸರಿಟ್ಟರು. ಆದರೆ ರಾಮಯ್ಯ ಎನ್ನುವ ಹೆಸರು ಅವರಿಗೆ ಇಷ್ಟವಾಗಲಿಲ್ಲವಂತೆ, ಬಳಿಕ ಅವರೇ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವೇಳೆ “ರಾಮೋಜಿ ರಾವ್” ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರಂತೆ.
87 ವರ್ಷ ವಯಸ್ಸಿನ ರಾಮೋಜಿ ರಾವ್ ನಿರ್ಮಾಪಕ, ಟಿವಿ ಕ್ಷೇತ್ರದ ಜೊತೆಗೆ ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದರು. ಮಾರ್ಗದರ್ಶಿ ಚಿಟ್ಫಂಡ್ಸ್ ಮತ್ತು ಪ್ರಿಯಾ ಫುಡ್ಸ್ನಂತಹ ಉದ್ಯಮಗಳು ಸ್ಥಾಪನೆಯಾಗಿ ಅನೇಕ ಜನರಿಗೆ ಉದ್ಯೋಗ ನೀಡಿದೆ. ರಾಮೋಜಿ ರಾವ್ ಅವರು ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು. ಇದು ಹೈದರಾಬಾದ್ ಮತ್ತು ಚಲನಚಿತ್ರೋದ್ಯಮದ ಅಭಿವೃದ್ಧಿಯ ಭಾಗವಾಯಿತು.
ವಿಶ್ವದ ಅತಿದೊಡ್ಡ ಫಿಲ್ಮ್ ಸ್ಟುಡಿಯೋ ರಾಮೋಜಿ ಫಿಲ್ಮ್ ಸಿಟಿ ರಾಮೋಜಿ ರಾವ್ ಸ್ಥಾಪಿಸಿದ ರಾಮೋಜಿ ಸಮೂಹದ ಒಡೆತನದಲ್ಲಿದೆ. 2016 ರಲ್ಲಿ, ಭಾರತ ಸರ್ಕಾರವು ಅವರಿಗೆ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು. ರಾಮೋಜಿ ರಾವ್ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.