ಬೆಂಗಳೂರು: ಎನ್ಐಎಗೆ ಸವಾಲಾಗಿದ್ದ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಕೊನೆಗೂ ಬೇಟೆ ಆರಂಭವಾಗಿದೆ. ದೇಶದ ಹಲವು ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು ಸಾಕ್ಷಿಗಳನ್ನು ಸಂಗ್ರಹಿಸುವುದರ ಜೊತೆಗೆ ಸ್ಪೋಟಕ್ಕೆ ಸಂಚು ರೂಪಿಸಿದವರಿಗೆ ಸಹಾಯ ಮಾಡಿದ್ದ ಸಂಚುಕೋರನೊಬ್ಬನನ್ನು ಬಂಧಿಸಿದ್ದಾರೆ.
ಮಾ.1 ರಂದು ಐಟಿಪಿಎಲ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಉಗ್ರರ ಕೃತ್ಯ ಎನ್ನುವುದು ಬಯಲಾಗಿತ್ತು. ಆದರೆ ಕೃತ್ಯ ಎಸಗಿದವರು ಮಾತ್ರ ಪತ್ತೆ ಇರಲಿಲ್ಲ. ಸತತ ಹಲವು ದಿನಗಳ ಕಾರ್ಯಾಚರಣೆ ಬಳಿಕ ಉಗ್ರ ಗುಂಪಿನ ಸಂಚುಕೋರನನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಜಾಮಿಲ್ ಷರೀಫ್ ಬಂಧಿತ ವ್ಯಕ್ತಿ.
Gud News: ಐಟಿ ಕಂಪನಿಗಳಿಗೆ ಸಾಕಷ್ಟು ನೀರು ಪೂರೈಸಲಾಗುವುದು: ಭಯಪಡುವ ಅಗತ್ಯವಿಲ್ಲವೆಂದ BWSSB
ಮುಜಾಮಿಲ್ ಷರೀಫ್ ಸ್ಪೋಟಕ್ಕೆ ಬೇಕಾದ ವಸ್ತುಗಳು ಹಾಗೂ ಬೇಕಾದ ಸಹಾಯವನ್ನು ದುಷ್ಕೃತ್ಯ ಎಸಗಿದವರಿಗೆ ಸರಬರಾಜು ಮಾಡಿದ್ದ ಎನ್ನಲಾಗಿದೆ. ಈತ ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿನ ಬಸವೇಶ್ವರ ನಗರದ ಹೋಟಲ್ನಲ್ಲಿ ಕೆಲಸ ಮಾಡುತ್ತಿದ್ದ.
ಎನ್ಐಎ ನಡೆಸಿದ ತನಿಖೆ ವೇಳೆ ಮುಜಾಮಿಲ್ ಷರೀಫ್, ಬಾಂಬ್ ಸ್ಫೋಟಕ್ಕೆ ನೆರವು ನೀಡಿದ್ದವನ ಜೊತೆ ಸತತ ಸಂಪರ್ಕದಲ್ಲಿದ್ದ ಎಂಬುದು ದೃಢಪಟ್ಟಿದೆ. ಹಲವೆಡೆ ಎನ್ಐಎ ದಾಳಿ ನಡೆಸಿ ಪರಿಶೀಲಿಸುತ್ತಿದ್ದು, ಷರೀಫ್ನ ಕಂಪ್ಯೂಟರ್, ಲ್ಯಾಪ್ಟಾಪ್ ಪರಿಶೀಲಿಸಿದಾಗ ರೂವಾರಿಗಳಿಗೆ ಈತ ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ.