ಬೆಂಗಳೂರು: ರಂಜಾನ್ ಮುಸ್ಲಿಂರ ಪವಿತ್ರವಾದ ಹಬ್ಬ ಈ ಸಮಯದಲ್ಲಿ ಬೆಳ್ಳಗ್ಗೆಯಿಂದ ಸಂಜೆಯವರೆಗೂ ರೋಜಾ ಮಾಡಿ ನಂತರ ಆಹಾರ ಸೇವಿಸುತ್ತಾರೆ. ರಂಜಾನ್ ಮಾಸ ಉಪವಾಸ ವ್ರತ ಆರಂಭವಾದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಡ್ರೈ ಪ್ರೋಟ್ಸ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ಜೋರಾಗಿದೆ..
ಒಂದಕ್ಕಿಂತ ಡಿಫ್ರೆಂಟ್ ಆಗಿರುವ ಡ್ರೈ ಪ್ರೋಟ್ಸ್ ಗಳು, ಡ್ರೈ ಫ್ರೋಟ್ಸ್ ಕೊಂಡುಕೊಂಡುವಲ್ಲಿ ಬ್ಯುಸಿಯಾಗಿರು ಗ್ರಾಹಕರು, ಗ್ರಾಹಕರ ಬೇಡಿಕೆಗೆ ತಕ್ಕಂತೆ ರಿಯಾಯಿತಿ ದರ ಫಿಕ್ಸ್ ಮಾಡಿರುವ ವ್ಯಾಪಾರಸ್ತರು, ಇನ್ನು ಯಾವ ಖರ್ಜೂರವನ್ನ ಖರೀಧಿ ಮಾಡ್ಲಿ ಅಂತ ಕನ್ಸೂಸ್ ಆಗಿರುವ ಹುಡುಗಿಯರು ಇವೆಲ್ಲವೂ ಕಂಡುಬಂದಿದ್ದು, ಶಿವಾಜಿ ನಗರದ ರಸೆಲ್ ಮಾರುಕಟ್ಟೆಯ ಡ್ರೈಫ್ರೂಟ್ ಅಂಗಡಿಗಳಲ್ಲಿ..
ಅಯ್ಯೋ.. ಮೊಬೈಲ್ʼನಲ್ಲಿ ಮಾತನಾಡುತ್ತಾ ಮಗುವನ್ನು ಫ್ರಿಡ್ಜ್ ನಲ್ಲಿಟ್ಟ ತಾಯಿ..! ವಿಡಿಯೋ ವೈರಲ್
ಹೌದು, ರಂಜನ್ ಹಬ್ಬ ಬಂದ್ರೆ ಸಾಕು ಶಿವಾಜಿನಗರದ ರಸಲ್ ಮಾರುಕಟ್ಟೆಯ ಖರ್ಜೂರದ ಅಂಗಡಿಯಲ್ಲಿ ವಿವಿಧ ದೇಶದ ಬಗೆ – ಬಗೆಯ ಖರ್ಜೂರ, ಒಣದ್ರಕ್ಷಿ, ಬಾದಮಿ, ಸೇರಿದಂತೆ ಹಲವು ಬಗೆಯ ಡ್ರೈ ಫ್ರೂಟ್ಸ್ ಗಳ ವ್ಯಾಪಾರ ಜೊರಗೆ ಇರುತ್ತೆ. ಹೀಗಾಗಿ ಈ ಬಾರಿಯಾ ರಂಜಾನ್ ಹಬ್ಬಕ್ಕೆ ರಸೆಲ್ ಮಾರುಕಟ್ಟೆಗೆ ವಿದೇಶದಿಂದ ಸುಮಾರು 30ಕ್ಕೂ ಹೆಚ್ಚಿನ ಬಗೆಯ ಖರ್ಜೂರಗಳು ಎಂಟ್ರಿಕೊಟ್ಟಿವೆ. ಇವು ಸಧ್ಯ ಸೌದಿ ಅರೇಬಿಯಾ, ಜೋರ್ಡಾನ್, ಇರಾನ್, ದಕ್ಷಿಣ ಆಫ್ರಿಕಾಗಳಿಂದ ತರಿಸಿಕೊಳ್ಳಲಾಗಿದ್ದು, ಉಳಿದ ಒಣಹಣ್ಣುಗಳಾದ ಅರ್ಕೂಟ್ ಸೇರಿದಂತೆ ಅಷ್ಘಾನಿಸ್ತಾನದ ಪೈನ್ ಬೀಜ, ಬ್ರೆಜಿಲ್ ನಟ್ಸ್, ಆಸ್ಪ್ರೇಲಿಯಾದ ಹೆಜಲ್ ನಟ್ಸ್, ಇರಾನ್ನ ಒಣ ಅಂಜೂರ, ಇರಾನಿ ಬಾದಾಮಿ ಕೂಡ ಬಂದಿದ್ದು, ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯುತ್ತಿದೆ. ಇನ್ನು, ಯಾವ್ಯಾವ ಡ್ರೈ ಫ್ರೋಟ್ಸ್ ಗಳು ಬಂದಿವೆ. ಅವುಗಳ ಬೆಲೆ ಎಷ್ಟು ಎನ್ನುವುದನ್ನ ನೋಡೊದಾದ್ರೆ
ಜಾಹಿದಿ – 150 kg
ಇರಾನ್ ಖರ್ಚುರಾ- 280 kg
ಕಲ್ಮಿ ಖರ್ಜುರ – 700 kg
ಸುಕ್ರಿ ಖರ್ಚುರ – 600 kg
ಒಮಾನಿ ಖರ್ಚುರ – 400 kg
ಸಗಾಯಿ ಖರ್ಚುರ – 700 kg
ಮಾಬ್ರುಮ್ ಖರ್ಚುರ – 900 kg
ಅಂಜುರಾ ಖರ್ಚುರ – 1200 kg
ಮೆಜ್ಜೋಲ್ ಖರ್ಚರ- 1600 kg
ಸುಪ್ರಿ ಖರ್ಚುರ – 600 kg
ರುಥ್ಥಬ್ – 500 kg
ಅಜ್ಬ ಖರ್ಚುರ – 1600 kg
ಬರ್ನಿ ಖರ್ಚುರ – 500 kg
ಅಸ್ವದಿ – 400 kg
ಮದೀನ ಡೇಟ್ಸ್ – 500 kg
ತುನಿಷಯನ್ ಖರ್ಚುರ – 500 kg
ರುಥ್ಥಬ್ ಜಾಹೇದಿ – 500 kg
ಸಫಾಯಿ – 600 kg
ಇನ್ನೂ ಖರ್ಜೂರ ಕೊಳ್ಳಲು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಗ್ರಾಹಕರು ರಸಲ್ ಮಾರುಕಟ್ಟೆಗೆ ಭೇಟಿ ನೀಡಿ ತಮಗೆ ಇಷ್ಟವದ ಡ್ರೈಪ್ರೂಟ್ ಗಳನ್ನೂ ಕೊಂಡುಕೊಂಡ್ರು. ಇನ್ನು ರಂಜಾನ್ ಬಂದಾಗ ಮಾತ್ರ ನಮಗೆ ಹೊರ ದೇಶಗಳ ಖರ್ಜೂರಗಳನ್ನ ಸವಿಯಲು ಸಿಗತ್ವೆ. ಕೊಂಚ ಬೆಲೆ ಏರಿಕೆಯಾದ್ರು ಡ್ರೈ ಪ್ರೂಟ್ಸ್ ಗಳನ್ನ ಮನೆಗೆ ತೆಗೆದುಕೊಂಡು ಹೋಗ್ತಾ ಇದಿವಿ ತುಂಬ ಖುಷಿಯಾಗ್ತಿದೆ ಎಂದ್ರು.
ಇನ್ನೂ, ರಂಜಾನ್ ನಲ್ಲಿ ಮುಸಲ್ಮಾನರು ಮಾತ್ರ ಡ್ರೈ ಫ್ರೋಟ್ಸ್ ಗಳನ್ನ ಖರೀದಿ ಮಾಡ್ತಾರೆ ಅನ್ನೋದು ಸುಳ್ಳು. ಹಿಂದೂ-ಕ್ರಿಶ್ಚಿಯನ್ನರು ಸೇರಿ ಎಲ್ಲರೂ ಒಣಹಣ್ಣುಗಳ ಖರೀದಿಗೆ ಹೆಚ್ವಾಗಿ ಬೇಡಿಕೆ ಇಡುತ್ತಿದ್ದಾರೆ. ಕೋವಿಡ್ ಇಲ್ಲದಿದ್ದರೂ ಕಳೆದ ವರ್ಷ ಒಣಹಣ್ಣಿನ ಸೀಸನ್ ಅಷ್ಟಾಗಿ ಇರಲಿಲ್ಲ. ವ್ಯಾಪಾರವೂ ಹೇಳಿಕೊಳ್ಳುವಷ್ಟು ಆಗಿರಲಿಲ್ಲ. ಆದರೆ, ಈ ಬಾರಿ ಉಪವಾಸ ಮಾಸದ ಆರಂಭದಿಂದಲೇ ಡ್ರೈಫ್ರೂಟ್ಗೆ ಹಿಂದೆಂದಿಗಿಂತಲೂ ಹೆಚ್ಚಿನ ಬೇಡಿಕೆ ಇದೆ. ಈ ಖರ್ಜೂರ ಸೇವನೇಯಿಂದ ರಕ್ತದೋತ್ತಡ, ಶುಗರ್ ಕಾಯಿಲೆಗೆ. ಹೃದಯ ಕಾಯಿಲೆ ಸೇರಿದಂತೆ ಹಲವು ರೋಗಗಳಿಗೆ ಈ ಖರ್ಜೂರ ಮದ್ದು ಅಂದ್ರು.
ಒಟ್ಟಾರೆ, ಎಂದಿನಂತೆ ವಿಶೇಷವಾಗಿ ಖರ್ಜೂರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಮಾರುಕಟ್ಟೆಗೆ ಈ ಬಾರಿ 27 ಕ್ಕೂ ಹೆಚ್ಚು ಬಗೆಯ ಖರ್ಜೂರಗಳು ಮಾರಾಟಕ್ಕೆ ಬಂದಿವೆ. ಹಬ್ಬದ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ನಡೆಯುತ್ತಿದ್ದು, ಜನರು ಸಹ ಖುಷಿಯಿಂದ ಈ ಬಾರಿ ರಂಜಾನ್ ಆಚರಣೆಗೆ ಮುಂದಾಗಿದ್ದಾರೆ.