ಬೆಂಗಳೂರು: ನಮಗೆ ಇಲ್ಲಿ ನಮ್ಮ ಒಗ್ಗಟ್ಟನ್ನ ತೋರಿಸುತ್ತಿದ್ದೇವೆ ನಮ್ಮ ಶಾಸಕರಿಗೆ ಅಮೀಷ ಒಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ .. ಒಂದು ಸಂದೇಶ್ ಕೊಡಲು ಅಭ್ಯರ್ಥಿ ಹಾಕಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
Water Supply: ಇಂದಿನಿಂದ ಎರಡು ದಿನ ಬೆಂಗಳೂರಿನ ಈ ಭಾಗಗಳಲ್ಲಿ ನೀರಿನ ವ್ಯತ್ಯಯ!
ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಅವರು, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋದಕ್ಕಿಂತ ಒಗ್ಗಟ್ಟು ತೋರಿಸಬೇಕು.ನಾವೆಲ್ಲ ಒಟ್ಟಿಗೆ ಇದ್ದೇವೆ ಯಾರು ಅಸಮಾಧಾನ ಇಲ್ಲ ಕೆಲವು ಭಿನ್ನಾಭಿಪ್ರಾಯಗಳು ಇರಬಹುದು ಅಷ್ಟೇ ನೋಡೋಣ ಗೆಲ್ತೀವಾ ಅಂತ ಎಂದು ತಿಳಿಸಿದರು. ಈ ವೇಳೆ ಶರಣು ಕುಂದಕೂರು ಹೆಸರು ಕೇಳುತ್ತಾ ಇದ್ದಂತೆ ಕೆಂಡಾಮಂಡಲರಾದರು.
ರಾಜ್ಯಸಭಾ ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಮಾತನಾಡಿ, ನಾನು ಪ್ರತಿಯೊಬ್ಬರಿಗೂ ಮತ ಕೇಳಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಮತ ಕೇಳೋಕೆ ಅವಕಾಶ ಇದೆ. ಎಲ್ಲಾ ಪಕ್ಷದವರನ್ನ ಕೇಳಿದ್ದೇನೆ. ಮತ ತೋರಿಸಿ ಹಾಕಬೇಕು. ಏನ್ ಆಗುತ್ತೋ ನೋಡೋಣ ಎಂದು ತಿಳಿಸಿದರು.