ಕಲಘಟಗಿ :- ತಾಲೂಕು ಶಿಗಿಗಟ್ಟಿ, ಮುತ್ತಗಿ, ಎಮ್ಮೆಟಿ, ಗುಡಿಯಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸ್ಥಿತಿ ಹೇಳತೀರದಾಗಿದೆ.ಹಿಂಗಾರು ಮಳೆಯ ಆರ್ಭಟ ಇವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ತಾಲೂಕಿನ ಹಿಂಗಾರು ಮಳೆಯ ಆರ್ಭಟ ಜೋರಾಗಿದೆ. ಕಳೆದ ಎರಡೂರು ದಿನಗಳದಿಂದ ತಾಲೂಕಿನ ಹಲವಡೆ ಪ್ರತಿನಿತ್ಯ ಮಳೆಯಾಗುತ್ತಿದೆ ಆದರೆ ಮಳೆಯಾದರೆ ಸಂತಸ ಪಡುವ ರೈತರು,
ಇದೀಗ ಸ್ವಲ್ಪ ದಿನ ಮೋಡಗಳೆ, ಇಲ್ಲಿ ನಿಂತು ಮಳೆ ಸುರಿಸದೇ, ಸ್ವಲ್ಪ ಮುಂದೆ ಹೋಗಿ ಅಂತ ಹೇಳುತ್ತಿದ್ದಾರೆ.ಯಾಕಂದ್ರೆ ಕಲಘಟಗಿ ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಮಕ್ಕೆಜೋಳವನ್ನು ಬೆಳೆಯುತ್ತಾರೆ. ಅದರಲ್ಲೂ ಕಲಘಟಗಿ ತಾಲೂಕು, ತುಮರಿಕೋಪ್ಪ, ಹುಲಿಕಟ್ಟಿ, ತಾವರೆಗೆರೆ ತಾಲೂಕಿನ ಹೆಚ್ಚಿನ ರೈತರು ತಮ್ಮ ಮೊದಲ ಬೆಳೆಯನ್ನಾಗಿ ಮೆಕ್ಕೆ ಜೋಳವನ್ನು ಬೆಳೆಯುತ್ತಾರೆ.
ಭಾರತೀಯ ಆಹಾರ ನಿಗಮದಲ್ಲಿದೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹ 71,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಖರ್ಚು ಮಾಡಿ ಬೆಳೆ ಬೆಳದಿರೋ ರೈತರಿಗೆ,ಈ ಬಾರಿ ಭೂಮಿ ತಾಯಿ ಉತ್ತಮ ಫಲವನ್ನೇ ನೀಡಿದ್ದಾಳೆ.ಅದೃಷ್ಟವೆನ್ನುವಂತೆ ಮಾರುಕಟ್ಟೆಯಲ್ಲಿ ಕೂಡ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ಎರಡು ಸಾವಿರದ ಐನೂರು ರೂಪಾಯಿವರಗೆ ಬೆಲೆಯಿದೆ. ಉತ್ತಮ ಬೆಲೆ ಇರೋದರಿಂದ ರೈತರು ಮೆಕ್ಕೆಜೋಳವನ್ನು ಕಟಾವು ಮಾಡಿ ರಾಶಿ ಮಾಡುತ್ತಿದ್ದಾರೆ ಆದರೆ ಹಿಂಗಾರು ಮಳೆ ಅಬ್ಬರ ಜೋರಾಗುತ್ತಿರುವದರಿಂದ ಮಳೆಯಿಂದ ಮೆಕ್ಕೆಜೋಳವನ್ನು ರಕ್ಷಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ವರದಿ: ಮಾರುತಿ ಲಮಾಣಿ ಕಲಘಟಗಿ