ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಸತತ ಮಳೆಗೆ ಭಾರಿ ಅವಘಡ ಸೃಷ್ಟಿಯಾಗಿದೆ.. ಚಿತ್ತಾಪುರ ತಾಲೂಕಿನ ಅಲ್ಲೂರು ಕೆ ಗ್ರಾಮದಲ್ಲಿ ರೈತ ನಾಗರೆಡ್ಡಿಗೆ ಸೇರಿದ ಅಪಾರ ಪ್ರಮಾಣದ ಕಬ್ಬು ಸಂಪೂರ್ಣ ನೆಲಕಚ್ಚಿದೆ.. ಸಾಲಸೂಲ ಮಾಡಿ ಬೆಳೆದಿದ್ದ ಕಬ್ಬು ಮಳೆಗೆ ಹಾಳಾದ ಪರಿಣಾಮ ಸರ್ಕಾರ ನೆರವಿಗೆ ಬರಬೇಕೆಂದು ಅನ್ನದಾತ ಆಗ್ರಹಿಸಿದ್ದಾನೆ.