ಹೈದರಾಬಾದ್: ಬಾಂಬ್ ಸ್ಫೋಟದ ಕಾರಣದಿಂದ ದೇಶಾದ್ಯಂತ ಸುದ್ದಿಯಾಗಿದ್ದ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಭಾರಿ ಚರ್ಚೆಯಲ್ಲಿ ಇರುವುದು ತೆಲಂಗಾಣದಲ್ಲಿನ ರಾಮೇಶ್ವರಂ ಕೆಫೆಯ ಶಾಖೆ. ಹೈದರಾಬಾದ್ನಲ್ಲಿರುವ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ನಗರದ ಅನೇಕ ಹೋಟೆಲ್ ಹಾಗೂ ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿದ್ದು,
ಮಾಧಾಪುರ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಆಹಾರ ಸುರಕ್ಷತೆಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ರೆಸ್ಟೋರೆಂಟ್ನಲ್ಲಿ ಅವಧಿ ಮುಗಿದ ಹಾಗೂ ಲೇಬಲ್ ಇಲ್ಲದ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಪ್ರಕಾರ, ಅವಧಿ ಮೀರಿದ ಸುಮಾರು 16 ಸಾವಿರ ರೂ ಮೌಲ್ಯದ 100 ಕೆಜಿ ಉದ್ದಿನ ಬೇಳೆ, 10 ಕೆಜಿ ನಂದಿನಿ ಮೊಸರು ಮತ್ತು ಎಂಟು ಲೀಟರ್ಗಳಷ್ಟು ಹಾಲು ರಾಮೇಶ್ವರಂ ಕೆಫೆಯ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದೆ.
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಇದಲ್ಲದೆ ಕಿಚನ್ನಲ್ಲಿ ಅಸಮರ್ಪಕ ಹಾಗೂ ಅಸ್ಪಷ್ಟ ಲೇಬಲಿಂಗ್ ಮಾಡಿದ ಇತರೆ ಪದಾರ್ಥಗಳು ಕೂಡ ದೊರಕಿವೆ. “ಅಸಮರ್ಪಕ ಲೇಬಲ್ನ 450 ಕೆಜಿಯಷ್ಟು ಕಚ್ಚಾ ಅಕ್ಕಿ, 20 ಕೆಜಿ ಬಿಳಿ ಬಟಾಣಿ ಜಪ್ತಿ ಮಾಡಲಾಗಿದೆ. ಈ ಎರಡೂ ವಸ್ತುಗಳ ಬೆಲೆ ಸುಮಾರು 26 ಸಾವಿರ ರೂ. ಅಲ್ಲದೆ, 30 ಸಾವಿರ ರೂ ಮೌಲ್ಯದ 300 ಕೆಜಿಯಷ್ಟು ಲೇಬಲ್ರಹಿತ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.