ಬಳ್ಳಾರಿ: ಬಳ್ಳಾರಿಯಲ್ಲಿಂದು ರಾಹುಲ್ ಗಾಂಧಿ ಆಗಮನ ಹಿನ್ನೆಲೆ ಸಚಿವ ನಾಗೇಂದ್ರ, ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಅವರಿಂದ ವೇದಿಕೆ ವೀಕ್ಷಣೆ ಮಾಡಿದ್ದಾರೆ. ವೇದಿಕೆ ವೀಕ್ಷಣೆಯ ಬಳಿಕ ಸಚಿವ ನಾಗೇಂದ್ರ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಧಿನಾಯಕರಾದ ರಾಹುಲ್ ಗಾಂಧಿ ಬರೋದನ್ನಾ ಕಾಯ್ತಾ ಇದ್ದೀವಿ, ಈ ಭಾಗದ AICC ಯ ಜಯರಾಮ್ ಸರ್, ಸೇರಿದಂತೆ ಅನೇಕರು ವೀಕ್ಷಣೆ ಮಾಡಿದ್ದೇವೆ. ಬಿಸಲು ಜಾಸ್ತಿ ಇದೆ,
ರಾಹುಲ್ ಗಾಂಧಿ ಜೀ ಯವರು ಬರುವಿಕೆ ಬೇಗ ಆಗಬಹುದು, ಎಷ್ಟೆ ಬೀಸಿಲಿದ್ರೂ ಜನರು ಬರ್ತಾರೆ ಅನ್ನೋ ನಿರೀಕ್ಷೆ ಇದೆ ಎಂದು ಹೇಳಿದರು. ಇನ್ನೂ ಸಿಎಂ ಸಿದ್ದರಾಮಯ್ಯ, ಸುರ್ಜೇವಾಲ, ಅವಳಿ ಜಿಲ್ಲೆಯ ಸಚಿವರು, ಶಾಸಕರು ಬರ್ತಾರೆ, ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಜನರು ಬಂದೇ ಬರ್ತಾರೆ, ರಾಹುಲ್ ಗಾಂಧಿಜೀಯವರ ಮಾತುಗಳು ಕೇಳ್ತಾರೆ ಜನರು, ರಾಹುಲ್ ಗಾಂಧಿಜೀಯವರ ಆಗಮನ ಹೊಸ ಹುಮ್ಮಸ್ಸು ತರುತ್ತದೆ ಎಂದು ಹೇಳಿದರು.