ಬಾಗಲಕೋಟೆ:- ಕೃಷ್ಣೆಯ ಒಡಲು ಬರಿದಾಗುತ್ತಿರುವುದರಿಂದ ಹಿಪ್ಪರಗಿ ಜಲಾಶಯ ಹಿನ್ನೀರು ನಂಬಿರುವ ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳ ಹಲವಾರು ನಗರ ಹಾಗು ಗ್ರಾಮಗಳಿಗೆ ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ.
Vijayapura: ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಪ್ರೊಟೆಸ್ಟ್!
ರಬಕವಿ-ಬನಹಟ್ಟಿ ಅವಳಿ ನಗರಕ್ಕೆ ಈಗಾಗಲೇ ನೀರಿನ ಕೊರತೆ ಎದುರಾಗಿದ್ದು, ಜನರು ಖಾಸಗಿ ಕೊಳವೆ ಬಾವಿ ಹಾಗು ನಗರಸಭೆಯ ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ.
ಇದೀಗ ನೀರಿನ ಭವಣೆ ಅಷ್ಟೊಂದು ಪ್ರಮಾಣದಲ್ಲಿದಿದ್ದರೂ ಕೊಡಗಳನ್ನು ಹೊತ್ತು ನೀರಿಗಾಗಿ ದೂರ ಕ್ರಮಿಸಬೇಕಾದ ಅನಿವಾರ್ಯತೆ ಕೆಲವೆಡೆಯಿದೆ. ಇದೇ ಸಮಸ್ಯೆ ಮುಂದುವರೆದರೆ ಕೊಳವೆ ಬಾವಿಗಳೂ ಸಹಿತ ಬತ್ತಿ ಹೋಗುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಅಲ್ಲಲ್ಲಿ ಸರ್ಕಾರಿ ಹಾಗು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜಾಗುತ್ತಿದೆ. ಕೆಲ ಕಡೆ ಖಾಸಗಿ ವ್ಯಕ್ತಿಗಳು ಕೊಳವೆ ಬಾವಿಯಿಂದ ನೀರು ಪೂರೈಕೆದಾರರ ವಿದ್ಯುತ್ ಬಿಲ್ ನಗರಸಭೆಯೇ ಕಟ್ಟಲಿದ್ದು, ಆತಂಕಪಡುವ ಅಗತ್ಯವಿಲ್ಲವೆಂದರು.
`ಮಹಾ’ ಇಳಿಕೆ
ಮಹಾರಾಷ್ಟ್ರದ ಜಲಾಶಯದಲ್ಲಿ ಸದ್ಯ 64 ಟಿಎಂಸಿಯಷ್ಟು ನೀರು ಮಾತ್ರವಿದೆಯೆಂಬ ಮಾಹಿತಿಯಿದೆ.
103 ಟಿಎಂಸಿಯಷ್ಟು ಸಾಮರ್ಥ್ಯ ಹೊಂದಿರುವ ಕೋಯ್ನಾ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವದು ಮಹಾರಾಷ್ಟ್ರ ಹಾಗು ಕರ್ನಾಟಕ ರೈತರಲ್ಲಿ ಆತಂಕ ಹೆಚ್ಚಿಸಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಕೊಂಕಣ ಭಾಗದಲ್ಲಿ ಮಳೆಯಾಗುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಳೆಯಿಲ್ಲದೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ನೀರಿಲ್ಲದಒಣಗಿದ ಬೆಳೆಗಳು
ಸಾಲ ಮಾಡಿಕೊಂಡು ಬೆಳೆಸಿದ ಕಬ್ಬು ರೈತನ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ.
ಕಳೆದೆರಡು 4 ವರ್ಷಗಳಲ್ಲಿಕೊರೊನಾ, ಅತಿವೃಷ್ಟಿಯಿಂದ ಕೆಂಗೆಟ್ಟಿರುವ ರೈತನಿಗೆ ಈಗ ಮಳೆಯಾಗದೇ ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕಿದ್ದಾನೆ. ನಗರಸಭಾ ಸದಸ್ಯ ಸಂಜೆಯ ತಗ್ಗಿ ಮಾತನಾಡಿ ರಬಕವಿ ಬನಹಟ್ಟಿ ರಾಂಪುರ ಹೊಸೂರು ನಗರಗಳಲ್ಲಿ ಇನ್ನೂ ಸುಮಾರು ಹತ್ತರಿಂದ ಹದಿನೈದು ದಿನಗಳ ಮಾತ್ರ ಕೃಷ್ಣಾ ನದಿ ನೀರು ಪೂರೈಕೆ ಆಗುತ್ತದೆ ಕೂಡಲೇ ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ ನಿಂದ ನೀರು ಬಿಡುಗಡೆಯಾದರೆ ಸಾರ್ವಜನಿಕರಿಗೆ ಮತ್ತು ಧನಕರಗಳಿಗೆ ರೈತರಿಗೆ ನೀರಿನ ವ್ಯವಸ್ಥೆ ಆಗುತ್ತದೆ ಎಂದು ಹೇಳಿದರು.
ನಗರಸಭಾ ಸದಸ್ಯ ಬಸವರಾಜ ಗುಡೋಡಗಿ ಮಾತನಾಡಿ ಪಕ್ಷಾತೀತವಾಗಿ ನೀರಿನ ಭವಣಿಯನ್ನು ಬಗೆಹರಿಸಬೇಕಾಗಿದೆ ಮಹಾರಾಷ್ಟ್ರ ಸರಕಾರ ಕೂಡಲೆ ಕೃಷ್ಣಾ ನದಿಗೆ ನೀರು ಪೂರೈಕೆ ಮಾಡಿ ನೀರಿನ ಭವಣೆಯನ್ನ ದೂರು ಮಾಡಬೇಕೆಂದು ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ