ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಜೈ ಹನುಮಾನ ಗರಡಿ ಮನೆ ನೂರು ವರ್ಷಕ್ಕೆ ಕಾಲು ಇಟ್ಟ ಗರಡಿ ಮನೆ. ಶ್ರೀ ರಬಕವಿ ಜೈ ಹನುಮಾನ ಗರಡಿ ಮನೆಯಲ್ಲಿ ಸಾವಿರಾರು ಕುಸ್ತಿಪಟುಗಳು ತಮ್ಮ ಕುಸ್ತಿ ಪ್ರದರ್ಶನ ಮಾಡಿ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಹೋಗಿ ಕುಸ್ತಿ ಕ್ರೀಡೆ ಮತ್ತು ಜಾತ್ರಾ ಮಹೋತ್ಸವ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ನಾನಾ ರೀತಿಯ ಬಹುಮಾನಗಳನ್ನು ಪಡೆದುಕೊಂಡಿದ್ದು ಇತಿಹಾಸ ನಿರ್ಮಿಸಿದೆ. ಈ ಗರಡಿ ಮನೆಯಲ್ಲಿ ಬೆಳೆದು ಸುಮಾರು 50ಕ್ಕೂ ಹೆಚ್ಚು ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಜಾತಿ ಭೇದಭಾವ ಇಲ್ಲದೆ ಎಲ್ಲರೂ ನನ್ನವರು ಎಂದು ತಿಳಿದುಕೊಂಡು ಇಲ್ಲಿ ಪ್ರತಿನಿತ್ಯ ಈ ಗರಡಿ ಮನೆಗೆ ಬಂದು ಕುಸ್ತಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.ಸದ್ಯ ಈ ಗರಡಿ ಮನೆಯಲ್ಲಿ ನೂರಕ್ಕೂ ಹೆಚ್ಚು ಕುಸ್ತಿಪಟ್ಟುಗಳು ತರಬೇತಿಯನ್ನು ಪಡೆಯುತ್ತಿದ್ದಾಳೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದ ಅಂಚಿನಲ್ಲಿ ಈ ರಬಕವಿ ಗರಡಿ ಮನೆ ಇದೆ. ಕುಸ್ತಿಪಟುಗಳಾಗಿ ಹೊರಹೊಮ್ಮಿ ಸದ್ಯದಲ್ಲಿ ಇಂಡಿಯನ್ ಆರ್ಮಿ ನೂರು ಜನ ಸೇವೆ ಮತ್ತು ವಿಜಯ ಕುಮಾರ ಮುರಗುಂಡಿ ಪಿಎಸ್ಐ. ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯರಾಗಿ ರವಿ ಬಸವಣ್ಣನವರು. ರವಿ ತುರದಿ. ಪಿಂಟು ಕಾಖಂಡಿಕಿ. ಸಾಗರ ಉಳ್ಳಾಗಡ್ಡಿ. ವಿಠ್ಠಲ ಕಟಗಿ. ಹೀಗೆ ಹಲವಾರು ಕುಸ್ತಿಪಟುಗಳು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಯರಗಟ್ಟಿ. ಜಗದಾಳ. ಆಸ್ಕಿ, ಆಸಂಗಿ. ಹಣಗಂಡಿ. ರಬಕವಿ ಬನಹಟ್ಟಿ ಹೀಗೆ ಹಲವಾರು ಸುತ್ತು ಮುತ್ತಲಿನ ಗ್ರಾಮಗಳಲ್ಲಿರುವಂತಹ ಕುಸ್ತಿಪಟುಗಳು ರಾತ್ರಿ ವಸತಿಗೆ ಬಂದು ಬೆಳಗ್ಗೆ ಎದ್ದು ಯೋಗ ಜ್ಞಾನ ಮತ್ತು ಕುಸ್ತಿಯಲ್ಲಿ ಪಾಲ್ಗೊಳ್ತಾಯಿರೋದುನ್ನ ನಮಗೆ ಸಂತೋಷವಾಗಿದೆ ಇನ್ನಷ್ಟು ಕುಸ್ತಿಪಟುಗಳಿಗೆ ತರಬೇತಿ ನೀಡಲು ಸರ್ಕಾರದ ಅನುದಾನ ಅವಶ್ಯಕತೆ ಇದೆ ಎಂದು ತರಬೇತಿದಾರರು ಬೆನಕಪ್ಪ ಬೆಕ್ಕೇರಿ ಹೇಳಿದರು.
ಸಾಗರ ಪೈಲ್ವಾನ್ ಜಗದಾಳ ಮಾತನಾಡಿ ರಬಕವಿ ಊರಿನ ಹಿರಿಯರ ಆಶೀರ್ವಾದದಿಂದ ಶತಮಾನ ಕಂಡ ಈ ಗರಡಿ ಮನೆಯಲ್ಲಿ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ತರಬೇತಿಯನ್ನು ಪಡಿತಾ ಇದ್ದಾರೆ, ನಾನು ಸಹ ಬಂದು ಇಲ್ಲಿ ತರಬೇತಿಯನ್ನು ಕೊಡುತ್ತಿದ್ದೇನೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿ ಪುಟುಗೋಳಾಗಿ ಹೊರಹೊಮ್ಮಲಿ ಎಂದು ನನ್ನ ಆಸೆ ಎಂದು ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ
![](https://ainlivenews.com/wp-content/uploads/2024/01/Ad-Banner-copy-scaled.jpg)