ರಬಕವಿ ಬನಹಟ್ಟಿ ತಾಲೂಕು ಎಂದು ನಾಮಕರಣ ಮಾಡಿ ಸುಮಾರು ವರ್ಷಗಳ ಕಳೆದು ಹೋಗಿದೆ. ಆದರೆ ಇಲ್ಲಿಯವರೆಗೂ ರಬಕವಿ ನಗರ ಅಭಿವೃದ್ಧಿ ಕಾಣದೆ ಇರುವುದು ಬೇಸರ ಸಂಗತಿ. ರಬಕವಿ ಮಹೇಶವಾಡಗಿ ಬ್ರಿಜ್ ಪ್ರಾರಂಭವಾಗಿದ್ದು 2014ರಲ್ಲಿ 2023 ಕಳೆಯಲು ಬಂದರು ರಬಕವಿ ಮಹಿಷವಾಡಗಿ ಬ್ರಿಜ್ ಕಾಮಗಾರಿ ಮಾತ್ರ ನಡೆದಿಲ್ಲ. ಇದಕ್ಕೆ ರಾಜ್ಯಕಾರಣಿಗಳ ಇಚ್ಛಾ ಶಕ್ತಿ ಕೊರತೆ ಇದೆ. ಸಂತಿ ಮಾಡುವ ರಾಜಕಾರಣಿಗಳಿಂದಲೇ ನಮ್ಮ ರಬಕವಿ ನಗರವು ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಹಿಂದೆ ಬಿದ್ದಿದೆ.
ರಬಕವಿ ನಗರವು ಅಭಿವೃದ್ಧಿ ಆಗಬೇಕಾದರೆ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ಚುನಾವಣಾ ಬಹಿಷ್ಕಾರ ಹಾಕಿ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ರಬಕವಿ ಮಹೇಶವಾಡಗಿ ಬ್ರಿಜ್ ಕಾಮಗಾರಿ ಕುರಿತು ಮಹತ್ವದ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ಡಾ. ರವಿ ಜಮಖಂಡಿ. ಸಂಗಪ್ಪ ಕುಂದಗೋಳ. ದರೆಪ್ಪ ಉಳ್ಳಾಗಡ್ಡಿ. ಎಮ್ ಬಿ ನಾಶಿ ಎಮ್ ಸಿ ಸಾಬೋಜಿ. ಸಂಗಯ್ಯ ಅಮ್ಮಣಗಿಮಠ. ಪ್ರಭು ಪೂಜಾರಿ. ಸತೀಶ ಹಜಾರೆ. ಸಂಜಯ ತೇಗ್ಗಿ. ಬಸವರಾಜ ದಲಾಲ. ರವಿ ಗಡಾದ ಸೇರಿದಂತೆ ರಬಕವಿ ಹಿರಿಯರು ವ್ಯಾಪಾರಸ್ಥರು ಮತ್ತು ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ