ಕೊಪ್ಪಳ:-ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯಾದಗಿರಿ PSI ಅವರ ಅಂತ್ಯ ಸಂಸ್ಕಾರ ಸ್ವಗ್ರಾಮದಲ್ಲಿ ನೆರೆವೇರಿದೆ.
ಅಂತ್ಯಕ್ರಿಯೆ ಮುನ್ನ ಸರ್ಕಾರಿ ಶಾಲೆ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಜನರು ದರ್ಶನ ಪಡೆದುಕೊಂಡರು. ಅಂತ್ಯಕ್ರಿಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು.
ಯಾದಗಿರಿ ಪಿಎಸ್ಐ ಅನುಮಾನಾಸ್ಪದ ಸಾವು ಕೇಸ್: ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದೇನು!?
ಇನ್ನೂ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ಪರಶುರಾಮ, ಯಾದಗಿರಿಯಲ್ಲಿ ಪಿಎಸ್ಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ವರ್ಗಾವಣೆ ವಿಚಾರದಲ್ಲಿ ನೊಂದಿದ್ದ ಪರಶುರಾಮ, ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರ ಕಾರಣ ಅಂತ ಪರಶುರಾಮ ಕುಟುಂಬದವರು ಆರೋಪಿಸಿದ್ದು, ಈ ಬಗ್ಗೆ ದೂರು ಕೂಡ ನೀಡಿದ್ದಾರೆ.,
ಇನ್ನೂ ಪರಶುರಾಮ ಅವರ ಪ್ರಾರ್ಥಿವ ಶರೀರವನ್ನು ನಿನ್ನೆ ಸಂಜೆ ಆರು ಗಂಟೆಗೆ ಅವರ ಹುಟ್ಟುರಾದ ಸೋಮನಾಳ ಗ್ರಾಮಕ್ಕೆ ತರಲಾಯಿತು. ಪರಶುರಾಮ ಅವರ ಪ್ರಾರ್ಥಿವ ಶರೀರಿ ಬರ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮಕ್ಕೆ ಹೆಮ್ಮೆ ತರುವಂತೆ ಇದ್ದ ಪರಶುರಾಮನ ಸಾವಿನ ಸುದ್ದಿ ಕೇಳಿದ್ದ ಗ್ರಾಮದ ಜನರು, ಅವರ ಮನೆಗೆ ಧಾವಿಸಿ ಬಂದಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ಕೂಡ ನೂರಾರು ಜನರು ಆಗಮಸಿದ್ದರು