ಕೋಲಾರ:- ಅಜ್ಜಪ್ಪನಹಳ್ಳಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಸೇರಿದ ಸ್ಥಳ ಉಳಿಸುವಂತೆ ಹಾಗೂ ಇ ಸ್ವತ್ತು ಮಾಡಿಕೊಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ.
ಕೋಲಾರ ತಾಲೂಕಿನ ಹುತ್ತೂರು ಹೋಬಳಿ,ವಡಗೂರು ಗ್ರಾಮ ಪಂಚಾಯತಿಗೆ ಸೇರಿದ ಅಜ್ಜಪ್ಪನಹಳ್ಳಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಸೇರಿದ ಸ್ಥಳ ಉಳಿಸುವಂತೆ ಹಾಗೂ ಇ ಸ್ವತ್ತು ಮಾಡಿಕೊಡುವಂತೆ ಕರ್ನಾಟಕ ದಲಿತ ರಕ್ಷಣಾ ರಾಜ್ಯ ಸಮಿತಿ ಹಾಗೂ ಕಾಂಗ್ರೆಸ್ ವೈದ್ಯಕೀಯ ಘಟಕದ ನೇತೃತ್ವದಲ್ಲಿ ಅಜ್ಜಪ್ಪನ ಹಳ್ಳಿ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ದಲಿತ ರಕ್ಷಣಾ ಸಮಿತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎಂ. ಎಸ್ .ನಾರಾಯಣಸ್ವಾಮಿ ಮಾತನಾಡಿ ಅಜ್ಜಪ್ಪನ ಹಳ್ಳಿ ಗ್ರಾಮದಲ್ಲಿ ಹಾಲಿ ಜಾಗದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಇದ್ದು,2015 ನೇ ಸಾಲಿನಲ್ಲಿ ಪಂಚಾಯಿತಿಯಲ್ಲಿ ಖಾತೆ ನಂಬರ್ 142 ರಂತೆ 35* 33* ಅಡಿಗಳ ಜಾಗ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಸೇರಿದ್ದಾಗಿರುತ್ತದೆ.
ದೇವಸ್ಥಾನದ ಪಕ್ಕದಲ್ಲಿ ಅದೇ ಗ್ರಾಮದ ಚಿಕ್ಕ ವೆಂಕಟೇಶಪ್ಪ ಬಿನ್ ಲೇಟ್ ಬೆಳ್ಳಪ್ಪ
ಜೋಪಡಿ ಹಾಕಿಕೊಂಡಿದ್ದು,ಪ್ರಸ್ತುತ ಅವರು ನಾವು ಈ ಜಾಗದ ಅಧೀನದಲ್ಲಿದ್ದೇವೆ. ಈ ಜಾಗ ನಮ್ಮದು ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಬಿಟ್ಟುಕೊಡುವುದಿಲ್ಲ ಎಂದು ತಕರಾರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನವಿಲ್ಲದೆ ಪಕ್ಕದ ಊರಿನಿಂದ ದೇವರನ್ನು ತಂದು ಪೂಜೆ ಮಾಡುವ ಪರಿಸ್ಥಿತಿ ಬಂದಿದೆ. ಹೊಸ ದೇವಾಲಯ ನಿರ್ಮಿಸಲು ಗ್ರಾಮಸ್ಥರು ತೀಮಾನಿಸಿದ್ದು,ಈ ಜಾಗವನ್ನು ಇ ಖಾತೆ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.
ಪಂಚಾಯಿತಿ ಅಧಿಕಾರಿಗಳು ಚಿಕ್ಕ ವೆಂಕಟೇಶಪ್ಪ ಕುಟುಂಬದವರೊಂದಿಗೆ ಶಾಮೀಲಾಗಿ ಚಿಕ್ಕ ವೆಂಕಟೇಶಪ್ಪ ನವರು ಕಳೆದ 50 ವರ್ಷಗಳಿಂದ ಕಂದಾಯ ಕಟ್ಟಿಕೊಂಡು ಬರುತ್ತಿದ್ದು,ಅವರಿಗೆ ಖಾತೆ ಮಾಡಲು ಜಾಗ ಖಾಲಿ ಮಾಡುವಂತೆ ಗೋಡೆ ಮೇಲೆ ನೋಟೀಸನ್ನು ಪಂಚಾಯಿತಿ ಅಧಿಕಾರಿಗಳು ಅಂಟಿಸಿರುವುದು ಕಾನೂನು ಬಾಹಿರವಾಗಿದೆ ಎಂದು ತಿಳಿಸಿದರು.
ವೆಂಕಟೇಶಪ್ಪ ಬಿನ್ ಲೇಟ್ ಬೆಳ್ಳಪ್ಪರವರು
ಖಾತೆ ಸಂಖ್ಯೆ 163/1 ಜಮೀನು ಹೊಂದಿದ್ದು ಇದರ ಖಾತೆ ಮಾಡಲು ಗ್ರಾಮಸ್ಥರ ತಕರಾರು ಇಲ್ಲ,ಆದರೆ ದೇವಾಲಯದ ಜಾಗವೇ ಖಾತೆ ಸಂಖ್ಯೆ 163/1 ಕ್ಕೆ ಸೇರಿದ್ದು ಎಂದು ಹೇಳಿ ಕೊಂಡು ಮೋಸ ಮಾಡುತ್ತಿರುವ ವೆಂಕಟೇಶಪ್ಪ ಕುಟುಂಬ ಆರ್ಥಿಕವಾಗಿ ಸದೃಢವಾಗಿದ್ದು ಕೋಟ್ಯಾಂತರ ಬೆಲೆ ಬಾಳುವ ಜಮೀನು ಹೊಂದಿದ್ದರೂ ನಿರ್ಗತಿಕರು ಎಂದು ಅರ್ಜಿ ಸಲ್ಲಿಸಿ ದೇವಾಲಯ ಜಾಗವನ್ನು ಕಬಳಿಸಲು ನೋಡುತ್ತಿದ್ದಾರೆಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಗ್ರಾಮದ ಮುಖಂಡರು ಈ ವಿಚಾರದ ಕುರಿತು ತಾಲ್ಲೂಕು ಪಂಚಾಯಿತಿ ಇ.ಓ ರವರಿಗೆ ಪಂಚಾಯಿತಿ ಪಿ.ಡಿ.ಓ ಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರಲ್ಲದೆ ಜಿ.ಪಂ.ಸಿ.ಇ.ಓ.ರವರು ದೇವಾಲಯದ ಜಾಗವನ್ನು ಉಳಿಸಿ ಕೊಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ. ವೈದ್ಯಕೀಯ ಘಟಕ ಜಿಲ್ಲಾ ಅಧ್ಯಕ್ಷ ಲೋಹಿತ್, ದಿಂಬ ಚಾಮನಹಳ್ಳಿ ಅಂಬರೀಶ್, ಸೋಮಶೇಖರ್, ವೆಂಕಟೇಶಪ್ಪ , ಗೋಪಾಲ್, ಮುನಿಯಪ್ಪ, ರಾಮಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ಮಹಿಳೆಯರು ಭಾಗವಹಿಸಿದ್ದರು.