ಬೆಳಗಾವಿ : ಮರಾಠಿ ಮಾತನಾಡದ್ದಕ್ಕೆ ಸಾರಿಗೆ ಸಂಸ್ಥೆ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕರ್ನಾಟಕದ ಕಡೆಯಿಂದ ಮಹಾರಾಷ್ಟ್ರ ಕ್ಕೆ ಹೋಗುವ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದು, ಕಾಗವಾಡ – ಮೀರಜ್ ಹಾಗೂ ಚಿಕ್ಕೋಡಿ – ಇಚಲಕರಂಜಿ ಬಸ್ ಸಂಚಾರ ಯಥಾ ಸ್ಥಿತಿ ಸಂಚಾರ ಪ್ರಾರಂಭವಾಗಿದೆ. ಮಹಾರಾಷ್ಟ್ರ- ಕರ್ನಾಟಕ ಬಸ್ ಸಂಚಾರ ಯಥಾಸ್ಥಿತಿಗೊಂಡಿದ್ದು, ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಗೆ ಸಂಚರಿಸುವ ಬಸ್ ಸಂಚಾರ ಮಾತ್ರ ಬಂದ್ ಮಾಡಲಾಗಿದೆ. ಪ್ರತಿನಿತ್ಯ ಚಿಕ್ಕೋಡಿ ಉಪವಿಭಾಗದಿಂದ ಕೊಲ್ಲಾಪೂರಗೆ ಬಸ್ಗಳು 80 ಟ್ರಿಪ್ ಸಂಚರಿಸುತ್ತಿದ್ದವು ಎಂದು ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ ಶಶಿಧರ ಮಾಹಿತಿ ನೀಡಿದ್ದಾರೆ.