ಬಾಗಲಕೋಟೆ :- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಿಕ್ಷಕರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
Itching Problem: ದೇಹದಲ್ಲಿ ಉಂಟಾಗುವ ತುರಿಕೆಯಿಂದ ಚಿಂತೆಯೇ? ಡೋಂಟ್ ವರಿ ಈ ಮನೆಮದ್ದುಗಳನ್ನು ಬಳಸಿ ನೋಡಿ!
ನಂತರ ಶಿಕ್ಷಕರು ಬಸವರಾಜ ಪಿ. ಬಾಗೇನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಸರ್ಕಾರ ಕೂಡಲೇ 2017 ವೃಂದ ಮತ್ತು ನೇಮಕಾತಿಯಲ್ಲಿ 2016ಕ್ಕಿಂತ ಮೊದಲ ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಸೇರಿದಂತೆ ಮತ್ತಿತರರು ಬೇಡಿಕೆಗಳ ಮನವಿಯಲ್ಲಿ ಸಲ್ಲಿಸಿದರು.