ಗದಗ: ಬೆಳೆ ವಿಮೆ ಹಾಗೂ ಬೆಳೆ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಗದಗ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಲಾಯಿತು. ರೈತ ಹಿತಾಭಿವೃಧ್ಧಿ ಸಂಘದಿಂದ ಪ್ರತಿಭಟನೆ ಮಾಡಿದ್ದು, ಕಳೆದ ವರ್ಷ ಬರದಿಂದಾಗಿ ತತ್ತರಿಸಿ ಹೋಗಿದ್ದೇವೆ. ಕೇಂದ್ರದಿಂದ ಬರ ಪರಿಹಾರದ ಹಣ ಬಂದ್ರೂ ಅದನ್ನ ಸಮರ್ಪಕವಾಗಿ ರೈತರ ಖಾತೆಗೆ ಜಮೆ ಮಾಡಿಲ್ಲ, ಕೆಲವೇ ರೈತರ ಖಾತೆಗೆ ಹಣ ಜಮಾ ಆಗಿದ್ದು ಉಳಿದ ರೈತರ ಖಾತೆಗೆ ಜಮಾ ಆಗಿಲ್ಲ,
ಜೊತೆಗೆ ಗದಗ ಜಿಲ್ಲೆ ಹೊರತುಪಡಿಸಿ ಅಕ್ಕಪಕ್ಕದ ಹಾವೇರಿ, ಬಾಗಲಕೋಟ, ಕೊಪ್ಪಳ ರೈತರ ಖಾತೆಗೆ ಬೆಳೆ ವಿಮಾ ಪರಿಹಾರದ ಹಣ ಬಂದಿದೆ. ಆದ್ರೆ ಅವರಿಗೆ ಜಮೆ ಆಗಿ ತಿಂಗಳಾದ್ರೂ ಗದಗ ಜಿಲ್ಲೆಯ ರೈತರ ಖಾತೆಗೆ ಜಮಾ ಆಗಿಲ್ಲ, ಎಫ್ ಐ ಡಿ ಆಗಿಲ್ಲ, ಆಧಾರ ಕಾರ್ಡ ಸರಿ ಇಲ್ಲ ಅಂತಾ ಹೇಳಿ ರೈತರನ್ನು ಅಲೆದಾಡಿಸುತ್ತೀರಿ, ಕೃಷಿ ಇಲಾಖೆ, ಬ್ಯಾಂಕ್, ತಹಶೀಲ್ದಾರ ಕಚೇರಿ, ಡಿಸಿ ಕಚೇರಿಗೆ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
7 ದಿನಗಳೊಳಗಾಗಿ ರೈತರ ಖಾತೆಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮಾ ಹಣ ಜಮಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇಲ್ದೇ ಹೋದ್ರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿ ರೈತರ ಖಾತೆಗೆ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ.