ಹಾವೇರಿ: ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಸಿದ್ದಪ್ಪ ಸರ್ಕಲ್ ಬಳಿ ನೂರಾರು ಕಾರ್ಯಕರ್ತರಿಂದ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅಕ್ರಮ ಹಣ ಗಳಿಸಿರುವ ಧಿರಜ್ ಸಾಹೂ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಾಗಿದ್ದು, ಧೀರಜ್ ಸಾಹೂ ಅವರನ್ನ ಬಂಧಿಸಬೇಕು, ಭ್ರಷ್ಟಾಚಾರದ ಕರಾಳ ಮುಖವೇ ಕಾಂಗ್ರೆಸ್ ಪಕ್ಷ, ಅಕ್ರಮ ಹಣ ಮತ್ತು ಆಸ್ತಿ ಗಳಿಸಿರುವ ಭ್ರಷ್ಟ ಧೀರಜ್ ಸಾಹೂ ಹಾಗೂ ಅವರ ಜೊತೆ ಶ್ಯಾಮಿಲಾಗಿರುವ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕಾರ ಎಂದು ನೂರಾರು ಬಿಜೆಪಿ ಕಾರ್ಯಕರ್ತರಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸ್ವಿಸ್ ಬ್ಯಾಂಕ್ ನಲ್ಲಿ ಕಾಂಗ್ರೆಸ್ ನಾಯಕರ ಹಣ ಇದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ವಿಪರೀತ ಹಣ ಸಂಗ್ರಹಣರ ಮಾಡುತ್ತಿದೆ. ಮೊನ್ನೆ ನಡೆದ 5 ರಾಜ್ಯಗಳಲ್ಲಿ ಕೇವಲ ಒಂದೇ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಲೋಕಸಭೆಯಲ್ಲಿ ಬಿಜೆಪಿಯನ್ನ ಸೋಲಿಸಬೇಕು ಎಂದು India ಮಾಡಿಕೊಂಡು ಅಕ್ರಮ ಹಣ ಸಂಗ್ರಹಣೆ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಠವಾದ ಬಹುಮತವನ್ನ ಕೊಟ್ಟು ಗೆಲ್ಲಿಸಬೇಕು. ಮತ್ತೊಮ್ಮೆ ನರೇಂದ್ರ ಮೋದಿಯವರನ್ನ ಗೆಲ್ಲಿಸುವ ಮೂಲಕ ದೇಶವನ್ನ ಉಳಿಸಬೇಕಾಗಿದೆ. ಈ ಭ್ರಷ್ಟ ಕಾಂಗ್ರೆಸ್ ನಾಯಕರನಗನ ಸೋಲಿಸಬೇಕು,ತಕ್ಕ ಪಾಠವನ್ನ ಕಲಿಸಬೇಕು ಎಂದ ಮಾಜಿ ಶಾಸಕ ಸಜ್ಜನ್ ಆಗ್ರಹಿಸಿದರು.