ಗದಗ: ಆಸ್ತಿ ವಿವಾದದಿಂದ ತಂದೆಯನ್ನೇ ಮಕ್ಕಳು ರಾಡ್ ನಿಂದ ಹೊಡೆದು ಕೊಂದಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜರುಗಿದೆ. ವಿವೇಕಾನಂದ ಕರಿಯಲ್ಲಪ್ಪನವರ (52) ಕೊಲೆಯಾದ ವ್ಯಕ್ತಿ.
ಮೊದಲನೇ ಹೆಂಡತಿ ಮೃತ ಕಸ್ತೂರೆಮ್ಮ ಪುತ್ರರಿಂದ ಕೊಲೆ ಮಾಡಲಾಗಿದೆ. ಪ್ರಕಾಶ, ಮಲ್ಲೇಶ ತಂದೆ ಕೊಲೆ ಮಾಡಿದ ಮಕ್ಕಳು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ವಿವೇಕಾನಂದನನ್ನ ಆಸ್ಪತ್ರೆಗೆ ಸಾಗಾಟ ಮಾಡುವ ಮಾರ್ಗಮಧ್ಯದಲ್ಲಿ ವಿವೇಕಾನಂದ ಸಾವನ್ನಪ್ಪಿದ್ದಾರೆ.
6 ಎಕರೆ ಜಮೀನಿನಲ್ಲಿ ಮೂರು ಎಕರೆ ಮಾರಾಟ ಮಾಡಿದ್ದ. ಮಾರಾಟ ಮಾಡಿದ 1.30 ಲಕ್ಷ ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಎರಡನೇ ಪತ್ನಿ ರೇಖಾ ಹೇಳಿಕೆ ನೀಡಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.