ನಟ ದರ್ಶನ್ ಚಿತ್ರರಂಗಕ್ಕೆ ಬಂದ ಆರಂಭದ ವರ್ಷಗಳಲ್ಲಿ ಮಾಡಿಕೊಂಡಿದ್ದ ಕಿರಿಕ್ ಬಗ್ಗೆ ನಿರ್ಮಾಪಕ ಭಾಮಾ ಹರೀಶ್ ನೆನಪು ಮಾಡಿಕೊಂಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಮತ್ತು ಕಿಟ್ ವಿತರಿಸಿದ ರಾಜು ಕಾಗೆ…!
ಮೆಜೆಸ್ಟಿಕ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ದರ್ಶನ್, ನಾಯಕ ನಟನಾಗಿ ನಟಿಸಿದ ಮೂರನೇ ಸಿನಿಮಾ ‘ನಿನಗೋಸ್ಕರ’ ಸಿನಿಮಾದಲ್ಲಿ ಮಾಡಿಕೊಂಡಿದ್ದ ಕಿರಿಕ್ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ‘ನಿನಗೋಸ್ಕರ’ ಸಿನಿಮಾದಲ್ಲಿ ದರ್ಶನ್ ನಾಯಕ ನಟನಾಗಿ ನಟಿಸಿದ್ದರು, ಆ ಸಿನಿಮಾದ ನಿರ್ಮಾಪಕರೊಟ್ಟಿಗೆ ಕಿರಿಕ್ ಮಾಡಿಕೊಂಡಿದ್ದ ದರ್ಶನ್ ಸಿನಿಮಾಕ್ಕೆ ಡಬ್ಬಿಂಗ್ ಮಾಡುವುದಿಲ್ಲ ಎಂದಿದ್ದರಂತೆ. ಆಗ ಬಸಂತ್ ಕುಮಾರ್ ಪಾಟೀಲರು ಅಂಬರೀಶ್ಗೆ ವಿಷಯ ಹೇಳಿ, ಅವರು ದರ್ಶನ್ ಅನ್ನು ಕರೆದು ಬುದ್ಧಿವಾದ ಹೇಳಿದ ಬಳಿಕವಷ್ಟೆ ದರ್ಶನ್ ಡಬ್ಬಿಂಗ್ ಮಾಡಿದರಂತೆ. ದರ್ಶನ್ ನಾಯಕ ನಟ ಆದ ಮೇಲೆ ಅದೇ ಮೊದಲಿಗೆ ಅಂಬರೀಶ್, ದರ್ಶನ್ ಬಳಿ ಮಾತನಾಡಿದ್ದು, ಆ ಘಟನೆಯ ಬಳಿಕವೇ ಅವರಿಬ್ಬರೂ ಆತ್ಮೀಯರಾದರು ಎಂದು ನೆನಪು ಮಾಡಿಕೊಂಡಿದ್ದಾರೆ ಭಾಮಾ ಹರೀಶ್
ಇನ್ನು ದರ್ಶನ್ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಕರಿಯ’ ಸಿನಿಮಾದ ಸಮಯದಲ್ಲಿಯೂ ಸಹ ದರ್ಶನ್ ದೊಡ್ಡ ಕಿರಿಕ್ ಮಾಡಿಕೊಂಡಿದ್ದರು. ಸಿನಿಮಾ ಅರ್ಧ ಶೂಟಿಂಗ್ ಮುಗಿದ ಮೇಲೆ ಚಿತ್ರೀಕರಣಕ್ಕೆ ಬಂದಿರಲಿಲ್ಲ. ಪ್ರೇಮ್ ಕರೆದರೆ ರೀಲ್ ಸುಟ್ಟುಹಾಕು ಎಂದಿದ್ದರು, ಆಗ ಪ್ರೇಮ್ ನನ್ನ ಬಳಿ ಬಂದು ಕಣ್ಣೀರು ಹಾಕಿ ನ್ಯಾಯ ದೊರಕಿಸಿಕೊಡುವಂತೆ ಹೇಳಿದ್ದರು ಎಂಬ ವಿಷಯವನ್ನೂ ಸಹ ಭಾಮಾ ಹರೀಶ್ ಹೇಳಿದ್ದಾರೆ. ಆ ನಂತರ ದರ್ಶನ್ಗೆ ಬುದ್ಧಿವಾದ ಹೇಳಿ ಪ್ರೇಮ್ ಹಾಗೂ ದರ್ಶನ್ ನಡುವೆ ಭಿನ್ನಾಭಿಪ್ರಾಯ ಸರಿಪಡಿಸಿದ ಬಳಿಕವೇ ಚಿತ್ರೀಕರಣ ಮುಂದುವರೆದಿತ್ತು ಎಂದಿದ್ದಾರೆ ಹರೀಶ್.