ಬೆಂಗಳೂರು: ದರ್ಶನ್ ಅವರು ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿದ್ದರೂ ಅವರ ಅಭಿಮಾನಿಗಳು ನಟನಿಗೆ ಭಾರೀ ಸಪೋರ್ಟ್ ಮಾಡುತ್ತಿದ್ದಾರೆ. ನಟನನ್ನು ನೋಡಲು ಜೈಲಿನತ್ತಲೂ ಅಭಿಮಾನಿಗಳು ಬರುತ್ತಿದ್ದು ದರ್ಶನ್ ಭೇಟಿಗಾಗಿ ಕಾದು ಕೂರುತ್ತಿದ್ದಾರೆ. ಇನ್ನೂ ಇಂದು ನಟ ದರ್ಶನ್ ಭೇಟಿಗೆ ನಟಿ ರಕ್ಷಿತಾ ಮತ್ತು ಜೋಗಿ ಪ್ರೇಮ್ ಆಗಮಿಸಿದರು. ಕಾರಿನಲ್ಲಿಯೇ ಪರಪ್ಪನ ಅಗ್ರಹಾರ ಜೈಲಿನ ಆವರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.
Yes Bank Lays Off: 500 ನೌಕರರನ್ನು ಕೆಲಸದಿಂದ ವಜಾಗೊಳಿಸಿದ Yes ಬ್ಯಾಂಕ್..! ಕಾರಣ ಹೀಗಿದೆ..
ಇನ್ನೂ ನಟ ದರ್ಶನ್ ಜೈಲು ಸೇರಿದ ನಂತರ ಅವರ ಅಭಿಮಾನಿಗಳು ಚಿತ್ರರಂಗದ ಗಣ್ಯರು ಜೈಲಿಗೆ ಬಂದು ಅವರನ್ನು ಭೇಟಿ ಮಾಡಿ ಹೋಗುತ್ತಿದ್ದಾರೆ. ಚಿತ್ರರಂಗದ ಸಹುದ್ಯೋಗಿಗಳೂ, ದರ್ಶನ್ ಅವರಿಂದ ನೆರವು ಪಡೆದವರು, ಅವರ ಅಭಿಮಾನಿಗಳು ಅವರನ್ನು ನೋಡುವುದಕ್ಕಾಗಿ ಜೈಲಿನತ್ತ ಬರುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇತ್ತೀಚೆಗೆ ಅವರ ವಿಶೇಷ ಚೇತನ ಅಭಿಮಾನಿಯೊಬ್ಬರು ಅವರನ್ನು ನೋಡಲು ಬಂದಿದ್ದರು.
ಈ ಘಟನೆಯ ನಂತರ ಅಭಿಮಾನಿಗಳಿಗೆ ನಟ ದರ್ಶನ್ ಮನವಿ ಮಾಡಿದ್ದು ಜೈಲಿನಿಂದಲೇ ನಟ ದರ್ಶನ್ ಮನವಿ ತಿಳಿಸಿದ್ದಾರೆ. ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ ದರ್ಶನ್ ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಸಾಧ್ಯವಾಗುವುದಿಲ್ಲ ಎಂದು ಅವರು ಈ ಮೆಸೇಜ್ ಮೂಲಕ ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)