ಮೈಸೂರು: ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಪ್ರತಾಪ್ ಸಿಂಹ ಮತ್ತೆ ಗುಡುಗಿದ್ದಾರೆ. ಪ್ರತಾಪ್ ಸಿಂಹಗೆ ಹೆಚ್.ಡಿ.ದೇವೇಗೌಡ್ರು ಟಿಕೆಟ್ ತಪ್ಪಿಸಿದ್ರು ಎಂಬ ಸಚಿವ ಕೆ.ವೆಂಕಟೇಶ್ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, “ಅನ್ನ ತಿನ್ನುವಂತಹ ಬಾಯಿಯಲ್ಲಿ ಏನೇನೋ ಮಾತನಾಡಬೇಡಿ. ಹೇಳಿಕೆ ನೋಡಿ ವೆಂಕಟೇಶ್ ಅವರ ಮೇಲಿದ್ದ ಗೌರವ ಮರೆಯಾಗಿದೆ” ಎಂದು ಅವರು ಗುಡುಗಿದ್ದಾರೆ.
“ದೇವೇಗೌಡರಿಗೆ ನಾಯಕರನ್ನು ಬೆಳೆಸಿ ಗೊತ್ತೆ ಹೊರತು, ತುಳಿದು ಗೊತ್ತಿಲ್ಲ. ನಿಮ್ಮನ್ನ ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು HDD, ಮರೆಯಬೇಡಿ. ನನಗೆ ಟಿಕೆಟ್ ಕೊಡಿಸಬೇಕು ಎಂದು 1 ಗಂಟೆಗಳ ಕಾಲ ಕಾದು ಅಮಿತ್ ಶಾ ಅವರ ಜೊತೆ ಫೋನ್ನಲ್ಲಿ ಮಾತನಾಡಿದ್ದು ದೇವೇಗೌಡರು. ನನಗೆ ಟಿಕೆಟ್ ಕೊಡಿ ಎಂದು ಕೇಳಿದವರಲ್ಲಿ ದೇವೇಗೌಡರು ಪ್ರಮುಖರು, ಅಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ..? ವೆಂಕಟೇಶ್ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.
ಒಂದೇ ಸೀರೆಯನ್ನು ಪದೇ ಪದೇ ಧರಿಸುತ್ತಿದ್ದೀರಾ!?, ಹುಷಾರ್ ಕ್ಯಾನ್ಸರ್ ಬರಬಹುದು!
“ಕಾಂಗ್ರೆಸ್ ನವರು ಮೊದಲು ಒಳ್ಳೆಯವರಿಗೆ ಟಿಕೆಟ್ ಕೊಡಲಿ. ನಾಮಪತ್ರ ಸಲ್ಲಿಕೆ ಮಾಡಲು ಇನ್ನೂ ಒಂದು ದಿನ ಅವಕಾಶ ಇದೆ. ಅಭ್ಯರ್ಥಿ ಬದಲಾಯಿಸಲು ಅವಕಾಶ ಇದೆ. ಅದನ್ನ ಬಳಸಿಕೊಳ್ಳಿ. ಚುನಾವಣೆ ಗೆಲ್ಲಲು ಮೊದಲು ಒಳ್ಳೆಯ ಅಭ್ಯರ್ಥಿ ಇರಬೇಕು. ನಿಮ್ಮ ಅಭ್ಯರ್ಥಿ (ಲಕ್ಷ್ಮಣ್) ಒಕ್ಕಲಿಗ ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ. ಆತ ಹಿಡಿದುಕೊಂಡು ಬಂದಿರುವ ಆ ಪ್ರಮಾಣ ಪತ್ರ ಯಾವುದು..? ಯಾವುದೋ KSOU ಅಲ್ಲಿ ಇಲ್ಲಿ ಸಿಗುತ್ತಿತ್ತಲ್ಲ ಆ ಪ್ರಮಾಣ ಪತ್ರನಾ..?” ಎಂದು ಅವರು ತಿಳಿಸಿದರು.