ಬೆಂಗಳೂರು : ಹಾಸನ ಸಂಸದ ಪಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ನಾಡಿನಾದ್ಯಂತ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಸಂತ್ರಸ್ತರ ಹೇಳಿಕೆ ಹಾಗೂ ದೂರು ಪಡೆಯಲಿಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮತ್ತೊಂದು ಕಡೆ ರೇವಣ್ಣ ಹಾಗೂ ಪ್ರಜ್ವಲ್ ಗೆ ನೋಟಿಸ್ ನೀಡಿದ್ರು ಹಾಜರಾಗಿಲ್ಲ. ಸದ್ಯ ಎಸ್ಐಟಿ ಅಧಿಕಾರಿಗಳ ಮುಂದಿನ ನಡೆ ಏನು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
IPL 2024: ಟಾಸ್ ಗೆದ್ದ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ… ರಾಜಸ್ಥಾನ್ ಬೌಲಿಂಗ್..!
ಯೆಸ್…ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ ಸಂಬಂಧ ಇಗಾಗ್ಲೆ ಎಸ್ ಐ ಟಿ ತನಿಖೆ ಚುರುಕುಗೊಳಿಸಿದೆ. ಸೋಮವಾರ ಸಿಐಡಿ ಕಚೇರಿಗೆ ಐವರು ಸಂತ್ರಸ್ತ ಮಹಿಳೆಯರು ಹಾಜರಾಗಿದ್ದು, ಎಸ್ ಐ ಟಿ ತಂಡದ ಮಹಿಳಾ ಐ ಪಿ ಎಸ್ ಅಧಿಕಾರಿ ಸೀಮಾ ಲಾಟ್ಕರ್ ಮುಂದೆ ಸಂತ್ರಸ್ತ ಮಹಿಳೆಯರು ಹಾಜರಾಗಿ ಹೇಳಿಕೆ ದಾಖಲಿಸಿದ್ರು.
ನಿನ್ನೆ ಕೂಡ ಐವರು ಮಹಿಳೆಯರು ಎಸ್ಪಿ ಸೀಮಾ ಲಾಟ್ಕರ್, ಹಾಗೂ ಡಿವೈಎಸ್ಪಿ ಪ್ರಭಾವತಿ ಮುಂದೆ ಹಾಜರಾಗಿದ್ದಾರೆ. ಇಗಾಗ್ಲೆ ಒಟ್ಟು ಹತ್ತು ಸಂತ್ರಸ್ತ ಮಹಿಳೆಯರು ಎಸ್ ಐ ಟಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇನ್ನೂ ಎಲ್ಲಾ ಸಂತ್ರಸ್ತೆಯ ವಿಚಾರಣೆಯನ್ನ ಗೌಪ್ಯವಾಗಿ ಎಸ್ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ.
ಇನ್ನು ಆಶ್ಲೀಲ ವಿಡಿಯೋ ಸಂಬಂಧ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಸಂಸದ ಪ್ರಜ್ವಲ್ ರೇವಣ್ಣಗೆ ವಿಶೇಷ ತನಿಖಾ ತಂಡವು ಲುಕ್ ಔಟ್ ನೊಟೀಸ್ ನೀಡಿದೆ. ಜರ್ಮನಿಯಲ್ಲಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಎಸ್ಐಟಿಗೆ ಮನವಿ ಮಾಡಿದ್ದರು. ಈ ಮನವಿಯನ್ನ ತಿರಸ್ಕರಿಸಿದ ತಂಡವು ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಲುಕ್ ಔಟ್ ನೊಟೀಸ್ ರವಾನಿಸಲಾಗಿದ್ದು,ದೇಶಕ್ಕೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣನನ್ನ ವಶಪಡೆಯಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.ಎಸ್ಐಟಿ ಮುಂದೆ ಹಾಜರಾಗದಿದ್ದರೆ ಪ್ರಜ್ವಲ್ ರೇವಣ್ಣ ಬಂಧನ ಸಾಧ್ಯತೆ ಇದೆ. ಇನ್ನು ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ಐಟಿ ವಿಚಾರಣೆ ಹಾಜರಾಗಬೇಕೆಂದು ನಿನ್ನೆ ಐಪಿಸಿ ಸೆಕ್ಷನ್ 41ರ ಅಡಿಯಲ್ಲಿ ನೊಟೀಸ್ ಜಾರಿ ಮಾಡಿತ್ತು. ಈ ಬಗ್ಗೆ ರೇವಣ್ಣವರು ವಿಚಾರಣೆ ಹಾಜರಾಗುವುದಾಗಿ ತಿಳಿಸಿದ್ದರು. ಒಂದು ವೇಳೆ ಇಂದು ವಿಚಾರಣೆಗೆ ಗೈರು ಹಾಜರಾದರೆ ಅವರನ್ನು ಬಂಧಿಸುವ ಕೆಲಸವನ್ನ ಎಸ್ಐಟಿ ಮಾಡಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಎಸೈಟಿ ಮಟ್ಟಕ್ಕೆ ಸದ್ಯ ತಂದೆ ಮಗ ಇಬ್ಬರೂ ಪರಾರಿಯಾಗಿದ್ದಾರೆ. ಅವರ ಇರುವಿಕೆ ಬಗ್ಗೆ ಇನ್ನೂ ಕೂಡ ಅಧಿಕೃತವಾಗಿ ಎಸೈಟಿಗೆ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಅವರ ಪ್ರೆಸೆನ್ಸ್ ಎಸೈಟಿಗೆ ಅಗತ್ಯವಿದೆ. ನೊಟೀಸ್ ನೀಡಿದರೂ ಹಾಜರಾಗದೆ ಹೋದಲ್ಲಿ ಎಸೈಟಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.