ಬೆಳಗಾವಿ:- ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮೆಂಟ್ ಮಾಡಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಬೇಸಿಗೆಯಲ್ಲಿ ಮೊಸರಿನ ಜೊತೆ ಇದನ್ನು ಸೇವಿಸಬಾರದಂತೆ…!
ನಮ್ಮ ಸರಕಾರ ಈಗಾಗಲೇ ಒಂದು ಎಸ್ ಐಟಿಯನ್ನು ರಚಿಸಿದೆ, ಅವರು ತನಿಖೆ ಮಾಡಿ ವರದಿ ನೀಡುತ್ತಾರೆ, ವರದಿಯಲ್ಲಿ ಎಲ್ಲ ಸಂಗತಿಗಳು ಬಯಲಾಗಲಿವೆ ಎಂದಷ್ಟೇ ಅವರು ಹೇಳಿದರು. ಅವರ ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂನ ಬ್ರಸ್ಸೆಲ್ಸ್ ನಲ್ಲಿ ತೀರಿಕೊಂಡಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಗಿನ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರು ಮೃತದೇಹವನ್ನು ತರಲು ನೆರವಾದರೂ ಸೌಜನ್ಯಕ್ಕಾದರೂ ಸಿದ್ದರಾಮಯ್ಯ ಆ ಸಹಾಯ ನೆನಪಿಟ್ಟುಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದು ಸುದ್ಧ ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದರು.
ನನ್ನ ಮಗ ಸತ್ತಿದ್ದು ಹೊರದೇಶದಲ್ಲಿ, ನಾನೇ ಹೋಗಿ ಮೃತದೇಹವನ್ನು ತೆಗೆದುಕೊಂಡು ಬಂದೆ, ಪ್ರಧಾನಿಯವರ ಸಹಾಯ ಕೇಳುವ ಸಂದರ್ಭವಾದರೂ ಯಾಕೆ ಉದ್ಭವಿಸುಸುತ್ತದೆ ಎಂದ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.