ಕೋಲಾರ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಕೂಡಲೇ ಬಂದು ತನಿಖೆಗೆ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಸಂಶಯಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ತಮ್ಮ ಕುಟುಂಬಕ್ಕೂ ಮುಜುಗರ ಎಂಬುದನ್ನು ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿದರು.
ತನಿಖೆ ನಡೆಸುವ ಕಾನೂನು ರಾಜ್ಯ ಸರಕಾರಕ್ಕಿದೆ. ಆದರೆ ವಿದೇಶದಿಂದ ಕರೆತರಲು, ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿ ಮತ್ತಿತರ ಅಂಶಗಳ ಕುರಿತು ಕೇಂದ್ರ ಸಹಕಾರ ನೀಡಲು ಬದ್ಧವಾಗಿದೆ. ಈ ಕುರಿತು ಡಿಐಜಿ ಅವರಿಗೆ ಹೇಳಿದ್ದೇನೆ ಎಂದರು. ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ನಿಜವಾಗಿಯೂ ಬದ್ದತೆ ಇದ್ದರೆ ಪ್ರಜ್ವಲ್, ಪೆನ್ಡ್ರೈವ್ ಪ್ರಕರಣವನ್ನು ಹೈಕೋರ್ಟ್ನ ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಿ ಪಾರದರ್ಶಕತೆ ಕಾಪಾಡಿಕೊಳ್ಳಲಿ ಎಂದು ಆಗ್ರಹಿಸಿದರು.
![Demo](https://ainlivenews.com/wp-content/uploads/2023/12/spoorthi-1.jpg)
NBCC Recruitment: ಪರೀಕ್ಷೆಯಿಲ್ಲದೆ NBCC ಕಾರ್ಪೊರೇಷನ್’ನಲ್ಲಿದೆ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
ಒಂದು ಪ್ರಕರಣ ತನಿಖೆ ಹಂತದಲ್ಲಿರುವಾಗ ಆಡಳಿತದಲ್ಲಿರುವವರು ಮನಬಂದಂತೆ ಮಾತನಾಡಿದರೆ ಅದು ತನಿಖೆಗೆ ಅಡ್ಡಿ ಮಾಡಿದಂತೆ ಎಂದು ತಿಳಿಸಿದ ಅವರು, ಸಿಎಂ, ಡಿಸಿಎಂ, ಗೃಹ ಸಚಿವರು ತನಿಖೆ ಹಂತದಲ್ಲೇ ಹೇಳಿಕೆ ನೀಡುವುದರಿಂದ ಅದು ಅಧಿಕಾರಿಗಳಿಗೆ ನಿರ್ದೇಶನವಿದ್ದಂತೆ ಆಗಿ ತನಿಖೆಯ ದಿಕ್ಕು ತಪ್ಪುತ್ತದೆ ಎಂದು ಎಚ್ಚರಿಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)