ಗದಗ:- ಜೆಡಿಎಸ್ ನಿಂದ ಸಂಸದ ಪ್ರಜ್ವಲ್ ರೇವಣ್ಣ ಉಚ್ಚಾಟನೆ ವಿಚಾರವಾಗಿ ಗದಗನಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ತಾರಾ ಅನುರಾಧಾ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಆ ಘಟನೆಗಳು ಸತ್ಯ ಆಗಿದ್ರೆ, ಅವರು ಆರೋಪಿಯಿಂದ ಅಪರಾಧಿ ಅಂತಾ ಸಾಬೀತಾದ್ರೆ ಬಹಳ ಅಸಹ್ಯಕರವಾದ ಘಟನೆ. ಅದು ಯಾವುದೇ ಮಹಿಳೆ ಒಪ್ಪಿಕೊಳ್ಳುವಂತಹ ಅಥವಾ ಗೌರವದಿಂದ ಕೂಡಿರುವಂತಹ ಘಟನೆಗಳು ಅಲ್ಲ. ಆದ್ರೆ ಜನತಾದಳ ಪಕ್ಷದಲ್ಲಿ ಅವರು ಉಚ್ಚಾಟನೆ ಮಾಡ್ತಿರೋದಾಗಲಿ ಶಿಕ್ಷೆ ಕೊಡೋದಾಗಲಿ ಅದು ಅವರಿಗೆ ಬಿಟ್ಟ ವಿಚಾರ. ಒಬ್ಬ ಮಹಿಳೆ ಆಗಿ, ಬಹಳ ಅಸಹ್ಯ ಅನ್ನೋ ಪ್ರಕರಣ ಅನ್ನೋದು ಸತ್ಯ ಎಂದರು.
ಇನ್ನೂ ಮೈತ್ರಿ ಆಗಿರೋ ಕಾರಣ ಬಿಜೆಪಿಗೆ ಪ್ರಜ್ವಲ್ ಪ್ರಕರಣ ಹೊಡೆತ ಕೊಡತ್ತಾ ಅನ್ನೋ ವಿಚಾರವಾಗಿ ಮಾತನಾಡಿ, ಖಂಡಿತ ಇಲ್ಲ ಎಂದಿದ್ದಾರೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಎಸ್ ಐ ಟಿ ಗೆ ಕೊಟ್ಟಿದ್ದೇವೆ ಅಂದಿದ್ದಾರೆ. ತನಿಖೆ ನಡೀತಿದೆ, ತನಿಖೆ ನಡೆದ ಮೇಲೆ ಸಾಬೀತಾದ್ರೆ ಉಚ್ಚಾಟನೆ ಮಾಡೋದು ಖಂಡಿತ ಅಂದಿದ್ದಾರೆ. ಅವರೇ ಆ ರೀತಿ ಹೇಳಿದಾಗ, ಗಟ್ಟಿ ನಿಲುವು ತಗೊಂಡಿರೋವಾಗ ಬಿಜೆಪಿ ಪಾರ್ಟಿಗೂ, ಆ ನಿಲುವಿಗೂ, ಘಟನೆಗೂ ಸಂಬಂಧ ಇಲ್ಲ. ಒಬ್ಬ ಮಹಿಳೆ ಆಗಿ ಬಹಳ ಅಸಹ್ಯ ಹುಟ್ಟಿಸೋ ಸಂಗತಿ ಅದು. ಖಡಾಖಂಡಿತವಾಗಲೂ ಖಂಡಿಸ್ತೇನೆ ಎಂದರು.
ಪ್ರಜ್ವಲ್ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡ್ತಿರೋ ವಿಚಾರವಾಗಿ ಮಾತನಾಡಿ, ಒಳ್ಳೇದು ಒಳ್ಳೇದು ಒಳ್ಳೇ ವಿಚಾರಗಳಿಗೆ ಪ್ರತಿಭಟನೆ ಮಾಡಿದ್ರೆ ನಾವೂ ಕೂಡಾ ವೆಲ್ಕಮ್ ಮಾಡ್ತೇವೆ ಎಂದರು.