ಕಲಘಟಗಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ತು ವರ್ಷ ಆಡಳಿತದಿಂದ ಜನರಿಗೆ ವಿಕಸಿತ ಭಾರತದ ಕಲ್ಪನೆ ಮೂಡಿ ಸರ್ವಾಂಗೀಣ ವಿಕಾಸ ಹೊಂದಿದೆ ಎಂದು ಕೇಂದ್ರ ಸಚಿವ ಲೋಕಸಭೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.
ತಾಲೂಕಿನ ಹಿರೇಹೊನ್ನಿಹಳ್ಳಿ ಹಾಗೂ ದೇವಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ ಬಿಜೆಪಿ ಪ್ರಚಾರ ಸಭೆಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮೋದಿಯವರ ಅವದಿಯಲ್ಲಿ ಜಗತ್ತಿನ ಅತಿದೊಡ್ಡ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಕೇವಲ ಜನರಿಗೆ ರೋಟಿ, ಕಪಡಾ, ಮಕಾನ್ ಭರವಸೆ ನೀಡಿದ್ದ ಕಾಂಗ್ರೆಸ್ ಹೊರತಾಗಿ ಪ್ರಪಂಚದ ಅತ್ಯದ್ಭುತ ಜ್ಞಾನವನ್ನು ಭಾರತದ ಜನತೆಗೆ ಮೋದಿಯವರು ನೀಡಿದ್ದಾರೆ ಎಂದರು.
ಬೆಂಗಳೂರಿನಲ್ಲಿ ದಾಖಲೆ ಮಟ್ಟದ ತಾಪಮಾನ : ಇನ್ನೆರಡು ದಿನಗಳಲ್ಲಿ 40 ಡಿಗ್ರಿಗೆ ಏರಿಕೆ ಸಾಧ್ಯತೆ
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಸ್ಥಳೀಯ ಸಚಿವ ಸಂತೋಷ ಲಾಡ್ ಮೋದಿಜಿಯವರನ್ನು ಪ್ರಶ್ನಿಸುವ ಪೂರ್ವದಲ್ಲಿ ಉತ್ತರ ಕರ್ನಾಟಕಕ್ಕೆ ಕೇಂದ್ರದಿಂದ ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಪಡಿಸಿದ ಕೀರ್ತಿ ಪ್ರಲ್ಲಾದ ಜೋಶಿಯವರದು ಎಂದು ತಿಳಿಯಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿ.ಎಫ್. ಪಾಟೀಲ, ಈರಣ್ಣ ಜಡಿ, ನಿಂಗಪ್ಪ ಸುತಗಟ್ಟಿ, ಬಸವರಾಜ ಶರೇವಾಡ, ಶಶಿಧರ ನಿಂಬಣ್ಣವರ, ಸದಾನಂದ ಚಿಂತಾಮಣಿ, ಕೇಶವ ಯಾಧವ, ಶಿವಲಿಂಗಪ್ಪ ಯಲಿವಾಳ, ಐ.ಸಿ. ಗೋಕುಲ, ಶಂಕರಪ್ಪ ರಾಯನಾಳ, ಸಹದೇವ ಕೆಲಗೇರಿ ಮುಂತಾದವರು ಇದ್ದರು.
ವರದಿ, ಮಾರುತಿ ಲಮಾಣಿ