ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಕಡೆ ಇಂದು ಸಂಜೆಯವರೆಗೂ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತ: ಕಿಲೋ ಮೀಟರ್ ಗಟ್ಟಲೆ ವಾಹನ ಸವಾರರು ಕ್ಯೂ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಕರೆಂಟ್ ಇರಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಕೋಣನಕುಂಟೆ, ತಲಘಟ್ಟಪುರ, ದೊಡ್ಡಕಲ್ಲಸಂದ್ರ, ಶ್ರೀನಿಧಿ ಲೇಔಟ್, ಅವಲಹಳ್ಳಿ, ಆಡುಗೋಡಿ, ಸಲಾರ್ಪುರಿಯಾ ಟವರ್, ಬಿಗ್ ಬಜಾರ್, ಅಸೆಂಚರ್, ಕೆಎಂಎಫ್ ಗೋದಾಮು, ನಂಜಪ್ಪ ಲೇಔಟ್, ನ್ಯೂ ಮೈಕೊ ರಸ್ತೆ, ಚಿಕ್ಕಲಕ್ಷ್ಮಿ ಲೇಔಟ್, ಮಹಾಲಿಂಗೇಶ್ವರ ಬಡಾವಣೆ, ಬೆಂಗಳೂರು ಡೇರಿ, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ಗಾರ್ಡನ್, ಚಿನ್ನಯ್ಯನಪಾಳ್ಯ, ಚಂದಪ್ಪ ನಗರ, ನಿಮ್ಹಾನ್ಸ್ ಆಡಳಿತಾತ್ಮಕ ಬ್ಲಾಕ್, ಬಂಡೆ ಸ್ಲಂ, ಸುಣ್ಣಕಲ್ ಫೋರಂ, ಬೃಂದಾವನ ಸ್ಲಂ, ಪೊಲೀಸ್ ವಸತಿ ಸಮುಚ್ಚಯ, ಆಡುಗೋಡಿ 7 ಮತ್ತು 8ನೇ ಬ್ಲಾಕ್, ಸೇಂಟ್ ಜಾನ್ಸ್ ಆಸ್ಪತ್ರೆ, ಕೋರಮಂಗಲ 3, 4, 5, 6ನೇ ಬ್ಲಾಕ್, ಮಾರುತಿನಗರ, ದಾಬಸ್ ಕಾಲೋನಿ, ಹಳೆ ಮಡಿವಾಳ, ಒರಾಕಲ್, ಮಡಿವಾಳ, ಚಿಕ್ಕ ಆಡುಗೋಡಿ, ಧವನಂ ಜ್ಯುವೆಲ್ಲರ್ಸ್, ಕೃಷ್ಣನಗರ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಪೂರೈಕೆಯಾಗುವುದಿಲ್ಲ.
ವಿಲ್ಸನ್ ಗಾರ್ಡನ್, ಹೊಂಬೇಗೌಡನಗರ, ಸಂಪಂಗಿರಾಮನಗರ, ಜೆ.ಸಿ.ರಸ್ತೆ, ಶಾಂತಿನಗರ, ಬಿಟಿಎಸ್ ರಸ್ತೆ. ಸುಧಾಮನಗರ, ಕೆ.ಎಚ್.ರಸ್ತೆ, ಶಾಂತಿನಗರ, ಸುಬ್ಬಯ್ಯ ವೃತ್ತ, ಸಿದ್ದಯ್ಯ ರಸ್ತೆ, ಲಾಲ್ಬಾಗ್ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿವಿದ್ಯುತ್ ಪೂರೈಕೆಯಲ್ಲಿವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.