ಬೆಂಗಳೂರು:- 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಇನ್ನಿತರ ಪಕ್ಷಗಳು ಸಕಲ ತಯಾರಿ ಮಾಡಿಕೊಂಡಿದೆ.
ಇನ್ನೂ ಅಭ್ಯರ್ಥಿಗಳ ಆಯ್ಕೆಯ ನಂತರ ರಾಜ್ಯದಲ್ಲಿ ಒಂದು ಸುತ್ತಿನ ಗುಪ್ತಚರ ವರದಿ ತರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರ ಮುಖದಲ್ಲಿ ಮುಗುಳ್ನಗೆ ಮೂಡಿದೆ ಎನ್ನಲಾಗಿದೆ.
Breaking News’ ಎಣ್ಣೆ ಪ್ರಿಯರಿಗೆ ಶಾಕಿಂಗ್ ಸುದ್ದಿ, ಮತ್ತೆ ಮದ್ಯ ಬೆಲೆ ಏರಿಕೆ!
ಒಂದು ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ (Lok Sabha Election 2024) ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡುವ ಮುನ್ನ ಮತದಾರರ ಒಲವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಗುಪ್ತಚರ ವರದಿ ತರಿಸಿಕೊಂಡಿದ್ದರು. ಹೈಕಮಾಂಡ್ ಟಾಸ್ಕ್ ಕೊಟ್ಟ ಹಿನ್ನೆಲೆಯಲ್ಲಿ ಸರ್ವೇ ಮೊರೆ ಹೋದ ಸಿಎಂ ಸಿದ್ದರಾಮಯ್ಯ, ಅಭ್ಯರ್ಥಿ ಆಯ್ಕೆಗೂ ಮೊದಲು ಒಂದು ಸರ್ವೇ ಮಾಡಿಸಿದ್ದರು. ಸ್ಥಾನಗಳಿಕೆ ಎರಡಂಕಿ ದಾಟುವುದು ಡೌಟ್ ಅಂತ ರಿಪೋರ್ಟ್ ಸಿಕ್ಕಿತ್ತು. ಇದರಿಂದ ಸಿಎಂ ಸೇರಿದಂತೆ ಕೆಪಿಸಿಸಿ ಆಘಾತಗೊಂಡಿತ್ತು.
28 ಲೋಕಸಭಾ ಕ್ಷೇತ್ರ ಚುನಾವಣಾ ಕಾವು ಏರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಆಲರ್ಟ್ ಆಗಿದ್ದು, ಅಭ್ಯರ್ಥಿ ಆಯ್ಕೆ ಮುಗಿದ ಬಳಿಕ ಇನ್ನೊಂದು ಸುತ್ತಿನ ರಿಪೋರ್ಟ್ ಪಡೆದಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಕಾಂಗ್ರೆಸ್ ಸ್ಥಾನಮಾನ ಚೇತರಿಕೆ ಬಗ್ಗೆ ರಿಪೋರ್ಟ್ ಬಂದಿದೆ.
ಸಿಎಂಗೆ ಇನ್ನಷ್ಟು ಶಕ್ತಿ ತುಂಬಲು ಈ ವರದಿ ಕಾರಣವಾಗಿದೆ. ಕಾಂಗ್ರೆಸ್ ಸ್ಥಾನ ಎರಡಂಕಿ ದಾಟಲಿದೆ ಎಂದು ಆಂತರಿಕ ವರದಿ ತಿಳಿಸಿದೆ. ಕ್ಷೇತ್ರದಲ್ಲಿ ಏನು ಚರ್ಚೆ ಆಗುತ್ತಿದೆ, ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ಜನ ಅಭಿಪ್ರಾಯ ಏನು, ಮೋದಿ ಅಲೆ ಇನ್ನೂ ಇದೆಯಾ ಇತ್ಯಾದಿ ಪ್ರಶ್ನೆಗಳನ್ನು ಸರ್ವೇಯಲ್ಲಿ ಕೇಳಲಾಗಿತ್ತು.
ಈ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಹಲವು ಕ್ಷೇತ್ರಗಳಲ್ಲಿ ಗ್ಯಾರೆಂಟಿ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಇದೆ. ಗ್ಯಾರೆಂಟಿಗಳು ಕೈ ಸೇರಿರುವವರು ಕಾಂಗ್ರೆಸ್ಗೆ ಮತ ಹಾಕುವುದು ಗ್ಯಾರೆಂಟಿಯಾಗಿದೆ. ಗ್ಯಾರೆಂಟಿಗಳಿಂದ ವಂಚಿತರಾದವರು ಕೈ ಪಕ್ಷದಿಂದ ದೂರವಾಗುವುದು ಖಚಿತವಾಗಿದೆ.
ಸದ್ಯ ರಾಜ್ಯದಲ್ಲಿ ಮೋದಿ ಅಲೆ ಇದೆ. ಆದರೆ ರಾಜ್ಯದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿರುವುದು, ಬಿಜೆಪಿಯ ಅಂತರಿಕ ಕಚ್ಚಾಟಗಳು ಕಾಂಗ್ರೆಸ್ಗೆ ಲಾಭ ತಂದುಕೊಡಲಿವೆ. ಇದು ಕಳೆದ ಹದಿನೈದು ದಿನಗಳಲ್ಲಿ ಆದ ಬೆಳವಣಿಗೆಯಿಂದ ಕೈ ಪಕ್ಷಕ್ಕೆ ಆಗಿರುವ ಲಾಭ ಎಂದರೆ ತಪ್ಪಾಗಲ್ಲ.