ತುಮಕೂರು: ಕಳಪೆ ಇಟಾಚಿ ಕೊಟ್ಟು ರೈತನಿಗೆ ತ್ರಾಸ್ ಕೊಟ್ಟಿದ್ದಾರೆಂದು ಆರೋಪಿಸಿ ಶೋಂರೂಮ್ ಸಿಬ್ಬಂದಿ ವಿರುದ್ದ ಶೋ ರೂಂ ಎದುರು ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ರೈತ ರವಿ ಎಂಬುವವರು ತುಮಕೂರಿನ ಅಂತಸರನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಶೋ ರೂಂನಲ್ಲಿ 02_03_23ರಲ್ಲಿ ಟಾಟಾ ಇಟಾಚಿ ವಾಹನ 25 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಇಟಾಚಿ ಖರೀದಿಸಿದ ಮೂರೇ ತಿಂಗಳಿಗೆ ಇಂಜಿನ್ ನಲ್ಲಿ ತೀವ್ರ ಬಿಸಿ. ಹಾಗೂ ಮೂರ್ನಾಲ್ಕು ಬಾರಿ ರಿಪೇರಿಗೆ ಬಂದಿತ್ತು. ರಿಪೇರಿ ಮಾಡಿದರೂ ಸಹ ಸರಿಯಾಗದ ಮಿನಿ ಇಚಾಟಿ,
ಇದ್ದರಿಂದ ಇಟಾಚಿ ಬದಲಾಯಿಸಿ ಕೊಡುವಂತೆ ರೈತ ಪಟ್ಟು ಹಿಡಿದಿದ್ದು, ಶೋ ರೂಂ ಮುಂದೆ ಶಾಮಿಯಾನ ಹಾಕಿಕೊಂಡು ಪ್ರತಿಭಟನೆಗೆ ಕುಳಿತಿದ್ದಾರೆ. ಶೋ ರೂಂಗೆ ಯಾರು ಓಡಾಡದ ರೀತಿಯಲ್ಲಿ ದಿಗ್ಬಂಧನ ಹಾಕಿದ ರೈತ. ಬದಲಿ ಇಟಾಚಿ ಕೊಡುವವರೆಗೂ ಪ್ರತಿಭಟನೆ ಕೈ ಬಿಡಲ್ಲವೆಂದು ಪಟ್ಟು ಹಿಡಿದಿದ್ದಾರೆ. PNS ಕನ್ಸ್ಟ್ರಕ್ಷನ್ ಎಕ್ಯೂಮೆಂಟ್ ಪ್ರವೈಟ್ ಲಿಮಿಟೆಡ್ ಹೆಸರಿನ ಶೋ ರೂಂ ಆಗಿದ್ದು, ಇಟಾಚಿ ಮಾಲೀಕ ಸರಿಯಾಗಿ ಸರ್ವೀಸ್ ಮಾಡಿಸಿಲ್ಲ ಎಂದು ಆರೋಪಿಸಿದ್ದು, ಸರ್ವೀಸ್ ಇಲ್ಲದ ಕಾರಣ ಇಂಜಿನ್ ನಲ್ಲಿ ಬಿಸಿಕಾಣಿಸಿಕೊಂಡಿದೆ ಎಂದ ಶೋರೂಂ ಸಿಬ್ಬಂದಿ ಹೇಳಿದ್ದಾರೆ.