ಬೆಂಗಳೂರು:- ನಗರದ ಪಶ್ಚಿಮ ವಿಭಾಗ ಪೊಲೀಸ್ರಿಂದ ರೌಡಿಗಳ ಮನೆ, ಅಡ್ಡೆ ಮೇಲೆ ದಾಳಿ ನಡೆದಿದೆ.
ಸೋಲದೇವನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ದೇವರ ತಾಳಿ ಸಹಿತ 2 ಹುಂಡಿ ಕಳ್ಳತನ!
ದಾಳಿ ವೇಳೆ ರೌಡಿಚಟುವಟಿಕೆಯಲ್ಲಿದ್ದ 21 ರೌಡಿಗಳನ್ನು ಬಂಧಿಸಲಾಗಿದೆ. ಚಂದ್ರಾಲೇಔಟ್ ರೌಡಿಶೀಟರ್ ತೀಟ್ನಿ ರವಿ, ಸೈಬರ್ ಮಂಜ, ಹರ್ಷಿತ್ ಸೇರಿದಂತೆ 21 ಜನರ ಬಂಧಿಸಲಾಗಿದೆ. 307 ಕೇಸ್ ಗಳಲ್ಲಿ ಭಾಗಿಯಾಗಿದ್ದ ರೌಡಿಗಳು ಇವರು ಎನ್ನಲಾಗಿದೆ.
ಸದ್ಯ ಬಂಧಿತ ರೌಡಿಗಳನ್ನ ರೋಡ್ ಗಳಲ್ಲಿ ಪೊಲೀಸರು ಮೆರವಣಿಗೆ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಯಿಂದ ಬಂಧಿತ ರೌಡಿಗಳ ರೋಡ್ ಶೋ ಮಾಡಲಾಗಿದೆ. ರೌಡಿಚಟುವಟಿಕೆಗಳಲ್ಲಿ ಭಾಗಿಯಾಗೋರಿಗೆ ಎಚ್ಚರಿಕೆ ನೀಡುವ ದೃಷ್ಟಿಯಿಂದ ರೌಡಿಗಳ ಪರೇಡ್ ನಡೆಸಲಾಗಿದೆ.