ಬೆಳಗಾವಿ: ಇದು ಪ್ರಚಾರ ಸಭೆ ಅಲ್ಲ, ವಿಜಯೋತ್ಸವದ ಸಭೆ. ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಇದು ಇಡೀ ಜಗತ್ತಿನ ಕನಸು. ನೀವು ನಾಲ್ಕು ಬಾರಿ ಸುರೇಶ್ ಅಂಗಡಿಯವರನ್ನು ಅವರನ್ನು ಗೆಲ್ಲಿಸಿದ್ದೀರಿ. ರಾಷ್ಟ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಹತ್ತು ವರ್ಷದಲ್ಲಿ ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿದೆ. ಕೆಲವೇ ವರ್ಷದಲ್ಲಿ ನಾವು ನಂಬರ್ 1 ಆಗುತ್ತೇವೆ. ಇದಕ್ಕೆಲ್ಲ ಕಾರಣ ಮೋದಿ.
Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?
ಇದು ಲೋಕಸಭೆ ಚುನಾವಣೆ, ನಾವು ರಾಷ್ಟ್ರೀಯ ಭದ್ರತೆ ಬಗ್ಗೆ ಯೋಚನೆ ಮಾಡಬೇಕು. ನೀವೆಲ್ಲ ಮೋದಿ ಅವರಿಗೆ ಆಶೀರ್ವಾದ ಮಾಡಬೇಕು. ಆರ್ಟಿಕಲ್ 370 ತಗೆದಿರುವುದಕ್ಕೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲಸಿದೆ. ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. ಪ್ರಧಾನಿ ಮೋದಿ ಸನಾತನ, ಧರ್ಮ, ಸಂಸ್ಕ್ರತಿ ಉಳಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.