ಬೆಂಗಳೂರು : ಅವರಿಬ್ಬರು ಬೆಸ್ಟ್ ಫ್ರೆಂಡ್ಸ್. ಒಂದಷ್ಟು ಕಾಮಿಡಿ, ಹುಡುಗಾಟ ಮಾಡಿಕೊಂಡು ಹ್ಯಾಪಿ ಆಗಿದ್ರು. ಆದರೆ, ಆ ಹುಡುಗಾಟವೇ ಸ್ನೇಹಿತನ ಉಸಿರು ನಿಲ್ಲಿಸಿದೆ!
ಹೌದು, ಸ್ವಲ್ಪ ಎಚ್ಚರ ತಪ್ಪಿದ್ರೆ ಮೋಜಿನಾಟವೂ ಮಸಣಕ್ಕೆ ದಾರಿಯಾಗಬಲ್ಲದು. ಸಿಲಿಕಾನ್ ಸಿಟಿಯಲ್ಲಿ ನಡೆದ ಘನಘೋರ ಘಟನೆಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
BJP – JDS Meeting: ಜೆಡಿಎಸ್ ಯುವ ನಾಯಕರಿಗೆ ಬಿಜೆಪಿ ಶಾಲು ಹೊದಿಸಿದ ಬಿ.ವೈ.ವಿಜಯೇಂದ್ರ : Photo Viral
ಏರ್ಪ್ರೆಶರ್ ಪೈಪ್ನಿಂದ ಗುದದ್ವಾರಕ್ಕೆ ಗಾಳಿ ಹಿಡಿದ ಪರಿಣಾಮ ಸ್ನೇಹಿತ ಸಾವನ್ನಪ್ಪಿರುವ ವಿಚಿತ್ರ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ. ಯೋಗಿಶ್ ಮೃತ (28) ಮೃತ ಯುವಕ. ಮುರಳಿ ಎಂಬಾತನೇ ಸ್ನೇಹಿತ ಸಾವಿಗೆ ಕಾರಣನಾದ ಯುವಕ. ಏರ್ ಪ್ಲೇಷರ್ ಪೈಪ್ ನಿಂದ ಇಬ್ಬರು ಆಟ ಆಡಲು ಮುಂದಾಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಇದೇ ಮಾರ್ಚ್ 25ರಂದು ಮೃತ ಯೋಗಿಶ್ ಥಣಿಸಂದ್ರದ CNS ಬೈಕ್ ಸರ್ವೀಸ್ ಸೆಂಟರ್ನಲ್ಲಿ ಬೈಕ್ ಸರ್ವೀಸ್ ಮಾಡಿಸಲು ಹೋಗಿದ್ದ. ತನ್ನ ಸ್ನೇಹಿತ ಮುರಳಿ ಕೂಡ ಸರ್ವೀಸ್ ಸೆಂಟರ್ ಬಳಿ ಬಂದಿದ್ದ. ಈ ವೇಳೆ ಇಬ್ಬರೂ ಏರ್ಪ್ರೆಶರ್ ಪೈಪ್ನಿಂದ ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಯೋಗಿಶ್ನ ಮುಖ ಹಾಗೂ ಹೊಟ್ಟೆಗೆ ಮುರಳಿ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಗುದದ್ವಾರಕ್ಕೆ ಗಾಳಿ ಬಟ್ಟಿದ್ದ.
ಹೀಗೆ ಇಬ್ಬರೂ ಕೆಲಕಾಲ ಹುಡುಗಾಟದಲ್ಲಿ ತೊಡಗಿದ್ದರು. ಗುದದ್ವಾರಕ್ಕೆ ಗಾಳಿ ಬಿಟ್ಟ ಕಾರಣ ಯೋಗಿಶ್ನ ಹೊಟ್ಟೆ ಉತಾ ಬಂದು ಕರಳು ಬ್ಲಾಸ್ಟ್ ಆಗಿದೆ. ತಕ್ಷಣ ಮುರಳಿಯೇ ಸ್ನೇಹಿತ ಯೋಗಿಶ್ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಯೋಗಿಶ್ ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿಕೊಂಡು