2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಗಳ ನಗದು ಬಹುಮಾನವನ್ನು ಘೋಷಣೆ ಮಾಡಿತ್ತು. ನಗದು ಬಹುಮಾನವನ್ನು ಆಟಗಾರರು, ಕೋಚ್ಗಳು ಹಾಗೂ ಇತರೆ ಎಲ್ಲಾ ಸಿಬ್ಬಂದಿಗಳಿಗೂ ಕೂಡ ನೀಡಲಾಗುತ್ತದೆ. ಚಾಂಪಿಯನ್ ಭಾರತ ತಂಡದಲ್ಲಿ ಆಡಿದ ಹಾಗೂ ಬೆಂಚ್ ಕಾದ ಎಲ್ಲಾ ಆಟಗಾರರಿಗೂ ಕೂಡ ತಲಾ 5 ಕೋಟಿ ರೂ. ಗಳನ್ನು ನೀಡಲಾಗುತ್ತದೆ.
BCCI Prize Money: ಬಿಸಿಸಿಐ ನೀಡಿದ್ದ 125 ಕೋಟಿ ರೂ.ನಗದು ಬಹುಮಾನದಲ್ಲಿ ಕೊಹ್ಲಿ, ರೋಹಿತ್ʼಗೆ ಸಿಕ್ಕಿದ್ದೆಷ್ಟು?
ಆದರೆ, ಈ ಮೂವರು ಆಟಗಾರರು ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಕ್ಕಿರಲಿಲ್ಲ. ಯುಎಸ್ಎ ಲೆಗ್ನಲ್ಲಿ ಮೊಹಮ್ಮದ್ ಸಿರಾಜ್ ಅವರು ಆಡಿದ್ದರು ನಂತರ ಅವರು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ಅವಕಾಶ ಮಾಡಿಕೊಟ್ಟಿದ್ದರು. ಕೆರಿಬಿಯನ್ ಲೆಗ್ನಲ್ಲಿ ಕುಲ್ದೀಪ್ ಎಲ್ಲಾ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದರು. ಆದರೆ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಯುಜ್ವೇಂದ್ರ ಚಹಲ್ಗೆ ಭಾರತದ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಕ್ಕಿರಲಿಲ್ಲ.
ಆದರೆ, ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಫೈನಲ್ ಹಣಾಹಣಿಯಲ್ಲಿ ಮ್ಯಾಚ್ ವಿನ್ನಿಂಗ್ 76 ರನ್ಗಳನ್ನು ಕಲೆ ಹಾಕಿ ಭಾರತ ತಂಡದ ಗೆಲುವಿಗೆ ನೆರವು ನೀಡಿದ್ದರು