ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಹಲವು ರೀತಿಯ ರೋಗ-ರುಜಿನಗಳು ಹೆಚ್ಚಾಗುತ್ತಿವೆ. ಈ ಸಮಯದಲ್ಲಿ ಹೆಚ್ಚು ವಿಧದ ಸೋಂಕು ಮುನುಷ್ಯರನ್ನು ಕಾಡುತ್ತದೆ. ಅದರಲ್ಲೊಂದು ಗುಲಾಬಿ ಕಣ್ಣಿನ ಸಮಸ್ಯೆ. ಕಾಂಜೆಕ್ಟಿವಿಟಿ ಎಂದು ಕರೆಯುವ ಈ ಪ್ರಕರಣಗಳ ಸಂಖ್ಯೆ ಇದೀಗ ಉತ್ತರ ಪ್ರದೇಶದ ಲಕ್ನೋ ಆಸ್ಪತ್ರೆಯಲ್ಲಿ ಏರಿಕೆ ಕಾಣುತ್ತಿದೆ. ವೈದ್ಯರು ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸಲಹೆ ನೀಡಿದ್ದಾರೆ.
ಪ್ರಯಾಣಿಕರಿಗೂ ಗುಡ್ ನ್ಯೂಸ್: ರಾಮನಗರಕ್ಕೂ ನಮ್ಮ ಮೆಟ್ರೋ ಸಂಚಾರ; ಟೆಂಡರ್ ಕರೆದ BMRCL!
ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನದ ಪರಿಣಾಮ ಸಾಕಷ್ಟು ಜನರ ಆರೋಗ್ಯದಲ್ಲಿ ವ್ಯತ್ಯಯ ಆಗುತ್ತಿದೆ. ಒಂದು ಕಡೆ ಸೊಳ್ಳೆ ಕಾಟದಿಂದ ಸಿಟಿಯಲ್ಲಿ ಡೆಂಗ್ಯೂ ಉಲ್ಬಣ ಆಗುತ್ತಾ ಇದ್ದರೆ, ಇನ್ನೊಂದು ಕಡೆ ಮಳೆ, ಚಳಿ, ಬಿಸಿಲು ಅಂತ ದಿನೇ ದಿನೇ ಬದಲಾಗುತ್ತಾ ಇರುವ ಕಾರಣ ಮಕ್ಕಳಲ್ಲಿ ಗುಲಾಬಿ ಕಣ್ಣಿನ ಸೋಂಕು ಕಾಣಿಸಿಕೊಳ್ಳುತ್ತಿದೆ.
ಮಾನ್ಸೂನ್ನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಕಂಜಂಕ್ಟಿವಿಟಿಸ್ ಅಥವ ಪಿಂಕ್ ಐ ಕಣ್ಣಿನ ಪ್ರಕರಣಗಳು ಹೆಚ್ಚಾಗಿವೆ. ಈ ಸೋಂಕು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಬ್ಯಾಕ್ಟೀರಿಯಾಗಳಿಂದ ಬರಲಿದೆ. ಇದು ಬಂದಾಗ ಒಂದರಿಂದ ಎರಡು ವಾರಗಳ ಕಾಲ ರೋಗಿಯನ್ನ ಬಾಧಿಸಲಿದ್ದು, ಕಣ್ಣಿನ ಕಾರ್ನಿಯಲ್ ಅಲ್ಸರ್, ಶಿಲೀಂಧ್ರಗಳು ಹಾಗೂ ಕಣ್ಣಿನ ಕಾರ್ನಿಯಾದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಇದರಿಂದಾಗಿ ಕಣ್ಣಿನ ಒಳಗೆ ಹುಣ್ಣುಗಳಾಗಲಿದ್ದು, ತೀವ್ರ ನೋವುಂಟು ಮಾಡುತ್ತದೆ. ಇದರಿಂದ ಕಣ್ಣುಗಳಲ್ಲಿ ನೀರು ಸೋರುವಿಕೆ ಹೆಚ್ಚಾಗಿ ಇರಲಿದೆ. ಇದರಿಂದಾಗಿ ಕಣ್ಣುಗಳು ಕೆಂಪು ಬಣ್ಣಕ್ಕೆ ಬರಲಿವೆ. ಈ ವೇಳೆ ಬೆಳಕಿನ ಸೂಕ್ಷ್ಮತೆ, ಮಸುಕಾದ ದೃಷ್ಟಿ ರೋಗಲಕ್ಷಣಗಳು ಕಂಡು ಬರಲಿದ್ದು, ತಕ್ಷಣಕ್ಕೆ ಚಿಕಿತ್ಸೆ ನೀಡದಿದ್ದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯಾತೆ ಇರಲಿದೆ. ಸಧ್ಯ ನಗರದ ಕಣ್ಣಿನ ಆಸ್ಪತ್ರೆಗಳಲ್ಲಿ ಇಂತಹ ಕೇಸ್ ಗಳು ಹೆಚ್ಚಾಗುತ್ತಿದ್ದು, ಮಕ್ಕಳ ಮೇಲೆ ನಿಗಾ ಇಡಿ ಅಂತ ವೈಧ್ಯರು ಸಲಹೆ ನೀಡ್ತಿದ್ದಾರೆ.
ಸೋಂಕು ಬಂದಾಗ ಏನೆಲ್ಲ ಕ್ರಮಗಳನ್ನ ತೆಗೆದುಕೊಳ್ಳಬೇಕು?
- ಸೋಂಕು ಬಂದಾಗ ಐಬುಪ್ರೊಫೇನ್ ಅಥವಾ ಕಣ್ಣಿನ ನೋವು ನಿವಾರಕಗಳನ್ನು ಬಳಸುವುದು.
- ಲೂಬ್ರಿಕೇಟಿಂಗ್ ಕಣ್ಣಿನ ಹನಿಗಳನ್ನು ಬಳಸುವುದು
- ಕಣ್ಣುಗಳ ಮೇಲೆ ಬೆಚ್ಚಗಿನ, ಒದ್ದೆಯಾದ ಬಟ್ಟೆಯನ್ನು ಹಾಕುವುದು
- ಶುದ್ಧವಾದ ಬಟ್ಟೆಯನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ನಂತರ ಅದರಲ್ಲಿ ಕಣ್ಣನ್ನ ನೆವಿಸುವುದು
- ಪ್ರತಿ ದಿನ ದಿಂಬಿನ ಕವರ್ ಬೆಡ್ಶೀಟ್ ಬದಲಿಸಬೇಕು
- ಶುದ್ಧ ಟವೆಲ್ ಬಳಸುವುದು.
- ಕೈಗಳನ್ನು ಆಗಾಗ್ಗೆ ತೊಳೆಯುವುದು.
- ಕಣ್ಣುಗಳು ಸಹಜ ಸ್ಥಿತಿಗೆ ಬರುವವರೆಗೆ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸದಿರುವುದು
- ಸೋಂಕು ಬಂದಾಗ ಅಂತರ ಕಾಯ್ದುಕೊಳ್ಳುವುದು.