ಬಾಗಲಕೋಟೆ:- ವೈಯಕ್ತಿಕವಾಗಿ ಬಂದರೆ ಯಾವ ಮಗನಿಗೂ ನಾನು ಬಗ್ಗಲ್ಲ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪ್ರಸಂಗ ಬಂದರೆ ರಾಜಕೀಯದಲ್ಲಿ ಯಾರು ಏನಾಗುತ್ತಾರೆ, ಯಾರಿಗೆ ಗೊತ್ತಿದೆ. 50 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರಿಗೆ ತಾಕತ್ ಪ್ರಶ್ನೆ ಮಾಡ್ತೀರಿ. ನಮ್ಮ ಕಾರ್ಯಕರ್ತರಿಗೆ ಸಭೆಗೆ ಹೋಗಬೇಡಿ ಎಂದು ಧಮ್ಕಿ ಹಾಕಿದ್ದಾರೆ ಎಂದು ಸಚಿವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು. ತುಮ್ಹಾರೇ ಧಮ್ಕಿ ನಹೀ ಚಲೇಗಾ ಬಚ್ಚಾ ಎಂದ ಶಿವಾನಂದ ಪಾಟೀಲ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಪಕ್ಷಕ್ಕಾಗಿ ತನು, ಮನ, ಧನದಿಂದ ದುಡಿದವರಿಗೆ ಅವಕಾಶ ಕೊಡಬೇಕು. ನನ್ನ ಪತ್ನಿ ವೀಣಾ ಕಾಶಪ್ಪನವರ್ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಆಕೆ ಜಿ.ಪಂ. ಅಧ್ಯಕ್ಷೆಯಾಗುವಾಗಲೂ ನಾನೊಬ್ಬನೇ ಗಂಡು ನಿಂತವನು. 2019ರಲ್ಲಿ ಯಾರೂ ಎಂಪಿ ಎಲೆಕ್ಷನ್ಗೆ ನಿಲ್ಲೋಕೆ ಮುಂದೆ ಬರಲಿಲ್ಲ. ಮೋದಿ ಅಲೆ ಅಂದರು, ನಮ್ಮ ಮುಂದೆ ಯಾವ ಅಲೆ ಕೂಡ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.
ಜಾತ್ಯಾತೀತ ನಿಲುವಿನ ಮೇಲೆ ನಿಂತಿರುವ ಪಕ್ಷ ಕಾಂಗ್ರೆಸ್. ಇವತ್ತು ನಮಗೆ ನಿಮಗೆ ಎಲ್ಲರಿಗೂ ನೋವಾಗಿದೆ. ಈ ವೇದಿಕೆ ಕಾಂಗ್ರೆಸ್ ಪಕ್ಷ ಹಾಗೂ ಯಾರ ವಿರುದ್ದ ಅಲ್ಲ. ನಮಗೆ ಬೆಂಬಲವಾಗಿ ಗಟ್ಟಿಯಾಗಿ ನಿಂತ ನಿಮ್ಮೆಲ್ಲರ ಪಾದಕ್ಕೆ ನನ್ನ ನಮನಗಳು. ನಮ್ಮ ಜಿಲ್ಲೆಯಲ್ಲಿ ಬಹಳ ಜನ ಆಕಾಂಕ್ಷಿಳಿದ್ದೆವು. ಈ ಜಿಲ್ಲೆಯಲ್ಲಿ ನಾವು ಹುಟ್ಟಿ ಬೆಳೆದಿದ್ದೇವೆ. ಐದು ಜನ ಕಾಂಗ್ರೆಸ್ ಶಾಸಕರಲ್ಲಿ ನಮ್ಮನ್ನು ಹಿರಿಯರು ಮರೆತಿದ್ದಾರೆ ಅನಿಸುತ್ತಿದೆ ಎಂದರು.