ಗದಗ:- 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಉಭಯ ಪಕ್ಷಗಳು ಸಕಲ ತಯಾರಿ ನಡೆಸಿದೆ.
ಅದರಂತೆ ಬಾಗಲಕೋಟೆ ಲೋಕಸಭಾ ಚುನಾವಣಾ ಅಖಾಡ ರಂಗೇರಿದ್ದು, ಬಾಗಲಕೋಟೆ ಲೋಕಸಭಾ ಬಿಜೆಪಿ ಅಬ್ಯರ್ಥಿ ಪಿ ಸಿ ಗದ್ದಿಗೌಡ್ರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸತತ ನಾಲ್ಕು ಬಾರಿ ಜಯ ಸಾಧಿಸಿ ಮತ್ತೆ ಐದನೇ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಗದ್ದಿಗೌಡ್ರು, ನರಗುಂದ ವಿಧಾನಸಭೆ ವ್ಯಾಪ್ತಿಯ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ.
ಪಿ ಸಿ ಗದ್ದಿಗೌಡ್ರಗೆ ಸಾಥ್ ನೀಡಿರೋ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ ಸಿ ಪಾಟೀಲ್, ಡ ಸ ಹಡಗಲಿ, ಗುಜಮಾಗಡಿ, ಕುರಡಗಿ, ಎರೆಬೇಲೇರಿ, ಕಿರಟಗೇರಿ, ಹುಯಿಲಗೋಳ, ಗಾವರವಾಡ, ದುಂದೂರ, ಶಾಗೋಟಿ, ಚಿಕ್ಕಹಂದಿಗೋಳ, ಬೆಳಹೋಡ, ಮದಗಾನೂರ, ಹೊಂಬಳ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ.
ದೇಶದ ರಕ್ಷಣೆ ಗಾಗಿ ಗದ್ದಿಗೌಡ್ರಗೆ ಮತ ನೀಡಿ ಮೋದಿಯವರನ್ನು ಪ್ರಧಾನಿ ಮಾಡಿ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕಾಂಗ್ರೆಸ್ ಸರ್ಕಾರ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿದೆ, ತೆರಿಗೆ ಹೆಚ್ಚಾಗಿದೆ. ಬಿಜೆಪಿ ತತ್ವ ಸಿಧ್ಧಾಂತದ ಮೇಲೆ ರಾಷ್ಟ್ರ ಕಟ್ಟುತ್ತಿದೆ. ಹಾಗಾಗಿ ಗದಗಿಗೌಡ್ರನ್ನ ಆರಿಸಿ ಕಳಿಸಿ ಎಂದು ಸಿಸಿ ಪಾಟೀಲ್ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು 10 ವರ್ಷಗಳ ಕಾಲ ರಜೆಯನ್ನೇ ತೆಗೆದುಕೊಳ್ಳದೇ ಜನರ ಕಲ್ಯಾಣಕ್ಕಾಗಿ ಶ್ರಮಿಸ್ತಿದ್ದಾರೆ. ಸಮಾಜದ ಕಟ್ಟಕಟೆಯ ವ್ಯಕ್ತಿಗೂ ಕೇಂದ್ರದ ಯೋಜನೆಗಳನ್ನು ಮುಟ್ಟುವ ಕಾರ್ಯ ಮಾಡಿದ್ದಾರೆ. ರಸ್ತೆ, ಶಾಲೆ , ವಿಮಾನ ನಿಲ್ದಾಣ, ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಕರೋನಾ ಕಾಲದಲ್ಲಿ ಬೀದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ನೀಡಿದ್ರು. ಎಲ್ಲ ಸಮಾಜದವರಿಗೂ ಆರ್ಥಿಕ ನೆರವನ್ನು ನೀಡೋ ಕೆಲಸ ಮಾಡ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಜಗತ್ತಿನಲ್ಲೇ ಐದನೇ ಸ್ಥಾನದಲ್ಲಿದೆ. ದೇಶದ ಅಭಿವೃದ್ಧಿ ಮತ್ತು ಭದ್ರತೆಗಾಗಿ ಮೋದಿಯವರನ್ನು ಪ್ರಧಾನಿ ಮಾಡಿ. ನೀವು ನನಗೆ ನಾಲ್ಕು ಬಾರಿ ಅವಕಾಶ ಕೊಟ್ಟಿದ್ದೀರಿ. ಅಭಿವೃಧ್ದಿಗಾಗಿ ಐದನೇ ಬಾರಿ ಗೆಲ್ಲಿಸಿ, ಮೋದಿ ಕೈ ಬಲಪಡಿಸಲು ಎಂದು ಪಿ ಸಿ ಗದ್ದಿಗೌಡ್ರ ಮನವಿ ಮಾಡಿದ್ದಾರೆ.