ಬೆಂಗಳೂರು: ಲೋಕಸಭಾ (Lok Sabha) ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸ್ಟಾರ್ ಪ್ರಚಾರಕರ್ತರು (Campaign) ತಮ್ಮ ಪಕ್ಷ ಮತ್ತು ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ನಡುವೆ ತೆಲುಗಿನ ಖ್ಯಾತ ನಟ, ರಾಜಕಾರಣಿ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಬಳ್ಳಾರಿಗೆ ಬರಲಿದ್ದಾರೆ. ಗಡಿನಾಡಿನಲ್ಲಿ ಅವರು ಪವರ್ ಪ್ರಚಾರ ಮಾಡಲಿದ್ದಾರೆ.
ಆಂಧ್ರದ ಗಡಿ ಭಾಗದ ಕ್ಷೇತ್ರಗಳ ಮತದಾರರನ್ನು ಸೆಳೆಯುವುದಕ್ಕಾಗಿ ಬಿಜೆಪಿ ಪಕ್ಷ ಪವನ್ ಕಲ್ಯಾಣ್ ಅವರನ್ನು ಬಳಸಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪರ ಪವನ್ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 17ರಂದು ಅವರು ಕರ್ನಾಟಕದ ಗಡಿ ಭಾಗದ ಜನರ ಮುಂದೆ ಇರಲಿದ್ದಾರೆ.
Old Pension Scheme: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹಳೆಯ ಪಿಂಚಣಿಗೆ ಮಹತ್ವದ ಆದೇಶ
ಏಪ್ರಿಲ್ 17ರಂದು ರಾಯಚೂರು, ಬಳ್ಳಾರಿ(Bellary), ಚಿಕ್ಕಬಳ್ಳಾಪುರ ಬಳಿಕೆ ಬೆಂಗಳೂರಿನಲ್ಲಿ ರೋಡ್ ಷೋ ಆಯೋಜನೆ ಆಗಿದ್ದು, ಬಳ್ಳಾರಿಯ ರಾಯಲ್ ವೃತ್ತದಿಂದ ಎಪಿಎಂಸಿ ವೃತ್ತದವರೆಗೂ ಶ್ರೀರಾಮುಲು ಪರ ಬಳ್ಳಾರಿಯಲ್ಲಿ ಪವನ್ ಮತಯಾಚನೆ ಮಾಡಲಿದ್ದಾರೆ.