ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ಗೆಳತಿ, ಪವಿತ್ರಾ ಗೌಡ ನಿದ್ದೆಯಿಲ್ಲದ ರಾತ್ರಿಯನ್ನು ಕಳೆಯುವಂತಾಗಿದೆ. ಐಶಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಇದರಿಂದ ಸಾಮಾನ್ಯ ಕೈದಿಯಂತೆ ಜೀವನ ನಡೆಸಬೇಕಾಗಿದೆ.
ತನ್ನ ದೈನಂದಿನ ಕೆಲಸ ಮುಗಿಸಿ ಯಾರೊಂದಿಗೂ ಹೆಚ್ಚು ಮಾತನಾಡದ ಪವಿತ್ರಾ ಗೌಡ ಮೌನಕ್ಕೆ ಶರಣಾಗಿದ್ದಾರೆ. ಅವರಿಗೆ 6024 ಕೈದಿ ಸಂಖ್ಯೆ ನೀಡಲಾಗಿದೆ. ಪವಿತ್ರಾ ಗೌಡ ಜತೆ ಇದೇ ಬ್ಯಾರಕ್ನಲ್ಲಿ 8 ಮಹಿಳಾ ಕೈದಿಗಳಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ನಿದ್ದೆಗೆ ಜಾರಿದ್ದ ಅವರು, ಸರಿಯಾಗಿ ನಿದ್ದೆ ಬಾರದೆ ಪದೇ ಪದೆ ಎದ್ದು ಕುಳಿತಿದ್ದಾರೆ.
ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ನೀರು ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತಾ?
ಮುಂಜಾನೆ 5 ಗಂಟೆಗೆ ಎದ್ದು ಜೈಲಿನ ಬ್ಯಾರಕ್ನಲ್ಲಿ ವಾಕಿಂಗ್ ಮಾಡಿ ಬಳಿಕ ಜೈಲಿನ ಸಿಬ್ಬಂದಿ ನೀಡಿದ ಉಪ್ಪಿಟ್ಟು, ಕಾಫಿ ಸೇವಿಸಿದ್ದಾರೆ. ಮಧ್ಯಾಹ್ನ ಅನ್ನ, ಸಾಂಬಾರ್, ಮುದ್ದೆ ತಿಂದಿದ್ದಾರೆ. ರಾತ್ರಿಯೂ ಅನ್ನ, ಸಾಂಬಾರ್ ತಿಂದಿದ್ದಾರೆ. ಉಳಿದ 8 ಆರೋಪಿಗಳು ಪವಿತ್ರಾ ಜತೆ ಕ್ವಾರಂಟೈನ್ ಸೆಲ್ನಲ್ಲಿ ಒಂದೇ ಕಡೆಯಿದ್ದಾರೆ.
ಇನ್ನೂ ಕಳೆದ ಎರಡು ದಿನಗಳಿಂದ ಜೈಲಿನಲ್ಲಿ ದರ್ಶನ್ ಚಡಪಡಿಸುತ್ತಿದ್ದರು. ಪತ್ನಿ ಮತ್ತು ಮಗನ ಭೇಟಿ ವೇಳೆ ಕಣ್ಣೀರು ಹಾಕಿ ಮನಸ್ಸು ಹಗುರ ಆಗಿತ್ತು. ಕಳೆದ ಹದಿನೈದು ದಿನಗಳ ನೋವು, ಹತಾಶೆ ಬೇಸರಕ್ಕೆ ಮಡದಿ ಮಗ ಸಾಂತ್ವನ ಸಿಕ್ಕಿತು. ವಿಜಯಲಕ್ಷ್ಮೀ ಅವರು ನಿನ್ನೆ ಜೈಲಿಗೆ ಭೇಟಿ ನೀಡಿ ದರ್ಶನ್ಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.