ಶಿವಮೊಗ್ಗ:- ದೇಶ ವಿಭಜನೆ ಕಾಂಗ್ರೆಸ್ ನಾಯಕರಿಗೆ ಹೊಸತೇನಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದೇಶ ವಿಭಜನೆ ಕಾಂಗ್ರೆಸ್ ನಾಯಕರಿಗೆ ಹೊಸತೇನಲ್ಲ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶವನ್ನು ಕೇವಲ ಅಧಿಕಾರದ ದಾಹಕ್ಕಾಗಿ ಹಿಂದೂಸ್ತಾನ ಮತ್ತು ಪಾಕಿಸ್ತಾನ ಅಂತ ಒಡೆದಿದ್ದು ಅವರೇ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವೀರಾವೇಶದಿಂದ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಒಂದೇ, ಅಖಂಡ ಭಾರತ ಒಡೆಯುವ ಮಾತನ್ನು ಯಾವತ್ತೂ ಸಹಿಸಲ್ಲ ಅಂತ ಹೇಳುತ್ತಾರೆ ಎಂದ ಈಶ್ವರಪ್ಪ, ಖರ್ಗೆ ಅವರು ಹಾಗೆ ಎಚ್ಚರಿಕೆ ಕೊಟ್ಟ ನಂತರವೂ ಸುರೇಶ್ ಮತ್ತು ವಿನಯ್ ಕುಲಕರ್ಣಿ ದೇಶ ವಿರೋಧಿ ಹೇಳಿಕೆ ನೀಡುವುದನ್ನು ಮುಂದುವರಿಸುತ್ತಾರೆ ಅಂದರೆ ಪಕ್ಷದ ಅಧ್ಯಕ್ಷ ಹೇಳುವ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ ಅನ್ನೊದು ಸ್ಪಷ್ಟವಾಗುತ್ತದೆ, ಅವರ ವಿರುದ್ಧ ಕ್ರಮ ಜರುಗಿಸಲಾಗದಿದ್ದರೆ ಖರ್ಗೆ ತಮ್ಮ ಸ್ಥಾನ ತ್ಯಜಿಸಿಬೇಕು ಎಂದು ಈಶ್ವರಪ್ಪ ಹೇಳಿದರು.