ತುಮಕೂರು :- ಪೋಷಕರೇ ಎಚ್ಚರ, ಎಚ್ಚರ, ಮಕ್ಕಳು ಮೇಲೆ ನೀವು ಎಷ್ಟು ನಿಗಾ ಇಟ್ಟರೂ ಸಾಲದು. ಮಕ್ಕಳು ಆಟ ಆಡುತ್ತಿದ್ದರೆ ಆಡ್ಲಿ ಅಂತ ನಿಮ್ಮ ಪಾಡಿಗೆ ನೀವು ಮನೆಯೊಳಗೆ ಕೂತಿದ್ರೆ ನಿಮ್ಮ ಮಕ್ಕಳು ಮನೆ ಬರಲ್ಲ ಹುಷಾರ್.. ಏನಿದು ಸ್ಟೋರಿ ಅಂತೀರಾ ಈ ಸುದ್ದಿ ಪೂರ್ತಿ ಓದಿ.
Arthritis Problem: ಸಂಧಿವಾತ ಸಮಸ್ಯೆ ನಿವಾರಿಸುವುದು ಹೇಗೆ!?, ನಿಮ್ಮ ಅಡುಗೆ ಮನೆಯಲ್ಲಿದೆ ದಿವ್ಯ ಔಷಧಿ!
ಆಟವಾಡುತ್ತಿದ್ದ ಇಬ್ಬರು ಮಕ್ಕಳನ್ನು ಅಪಹರಿಸಲು ಯತ್ನಿಸಿದ ಘಟನೆ ತುಮಕೂರು ಹೊರವಲಯದ ಅಣ್ಣೇನಹಳ್ಳಿ-ಕಾರಾಗೃಹ ರಸ್ತೆಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಸ್ವರ್ಣಗೃಹ ಲೇಔಟ್ನಲ್ಲಿ ಆಟವಾಡುತ್ತಿದ್ದ ಬಾಲಕರನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದು, ಕೂಡಲೇ ಎಚ್ಚೆತ್ತ ಮಕ್ಕಳು ಕಿರುಚಾಡಲು ಶುರುಮಾಡಿದ್ದಾರೆ.
ಇದರಿಂದ ಬೈಕ್ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಎಸ್ಕೇಪ್ ಆಗಿದ್ದಾರೆ. ಘಟನೆಯಿಂದ ತುಮಕೂರಿನ ಮಂದಿ ಆತಂಕಕ್ಕೊಳಗಾಗಿದ್ದಾರೆ. ಇನ್ನು ಖದೀಮರು ಮಕ್ಕಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.