ಬೆಂಗಳೂರು : ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದ ಕಾರಣಕ್ಕೆ ಪೊಲೀಸ್ ಮೆಟ್ಟಿಲೇರಿರುವ ಘಟನೆ ಆನೇಕಲ್ ತಾಲೂಕಿನ ಬಹುದೂರ್ ಪುರದಲ್ಲಿ ನಡೆದಿದೆ.. ಬಹದ್ದೂರ್ ಪುರದ ನಿವಾಸಿ ನಾಗರಾಜು ಅನಾರೋಗ್ಯದ ಕಾರಣಕ್ಕಾಗಿ ಇಂದು ಮೃತಪಟ್ಟಿದ್ದರು ಅಂತ್ಯಸಂಸ್ಕಾರ ಮಾಡಲು ಹೋಗಿದ್ದಾಗ ಬಹದ್ದೂರ್ ಪುರ ಗ್ರಾಮದ ರಮೇಶ್ ಎಂಬಾತ ಅಡ್ಡಿಪಡಿಸಿದ ಈ ಜಾಗ ನಮಗೆ ಸೇರಿದ್ದು ಅಂತ ಕಿರಿಕ್ ಮಾಡ್ಕೊಂಡಿದ್ರು ಹೀಗಾಗಿ ಪೊಲೀಸ್ ಮೆಟ್ಟಿಲೇರಿದ್ದಾರೆ..
ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಹುದ್ದೂರ್ ಪುರ ಸರ್ವೆ ನಂಬರ್ ,170 ರಲ್ಲಿ 5 ಎಕರೆ ಜಾಗವನ್ನು ಅಲ್ಲಿನ ಬಹುದೂರ್ ಪುರ ನಿವಾಸಿಗಳಿಗೆ ರುದ್ರಭೂಮಿಗೆ ಅಂತ ಬಿಡಲಾಗಿತ್ತು ಆದರೆ ಅಲ್ಲಿನ ಪ್ರಭಾವಿ ನಾಯಕ ರಮೇಶ್
ಸ್ಮಶಾನ ಜಾಗದಲ್ಲಿ ಅಕ್ರಮ ಬಡಾವಣೆ ಮಾಡಲು ಮುಂದಾಗಿದ್ದಾರೆ ಅಲ್ಲದೆ ಅಂತ್ಯಸಂಸ್ಕಾರಕ್ಕೂ ಕೂಡ ಅಡ್ಡಿಪಡಿಸಿದ್ದಾರೆ ಇನ್ನು ಇದೇ ಜಾಗದಲ್ಲಿ ಸುಮಾರು 70 ವರ್ಷಗಳಿಂದ ಅಂತ್ಯ ಸಂಸ್ಕಾರಕ್ಕಾಗಿ ಜಾಗವನ್ನ ಕಾಯ್ದಿರಿಸಲಾಗಿತ್ತು ಇದೇ ಪಕ್ಕದ ಜಾಗದಲ್ಲಿ ಹಿಂದೂ ರುದ್ರ ಭೂಮಿ ಪಕ್ಕದ ಜಾಗದಲ್ಲಿ ರಮೇಶ್ ಅವರಿಗೆ ಒಂದು ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಲಾಗಿತ್ತು.. ಅದರೆ ಈ ಜಾಗವನ್ನು ಬಿಟ್ಟು ಸ್ಮಶಾನದ ಜಾಗವನ್ನು ಕಬಳಿಕೆ ಮಾಡಲು ಮುಂದಾಗಿದ್ದಾರೆ ಅಂತ ಮಾಜಿ ಪುರಸಭೆ ಉಪಾಅಧ್ಯಕ್ಷ ರಾಮಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ