ವಿಜಯಪುರ:- ಬಿದರಕುಂದಿ ಗ್ರಾಮ ಪಂಚಾಯತಿ ತೆರಿಗೆ ಹಣವನ್ನು ಬಿಲ್ ಕಲೆಕ್ಟರ್ ಗುಳಂ ಮಾಡಿದ ಘಟನೆ ಜರುಗಿದೆ. 2023-2024 ಸಾಲಿನ ತೆರಿಗೆ ಹಣದಲ್ಲಿ ಬಿಲ್ ಕಲೆಕ್ಟರ್ ಭಾರಿ ಅವ್ಯಾಹಾರ ಮಾಡಿದ್ದಾರೆ.
World Cup 2024: ಆಸ್ಟ್ರೇಲಿಯಾ ವಿರುದ್ಧ ಭಾರತ ಮೋಸದಿಂದ ಗೆದ್ದಿದೆ.. ಪಾಕ್ ಮಾಜಿ ನಾಯಕನ ಆರೋಪ..!
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಬಿಲ್ ಕಲೆಕ್ಟರ್ ಎನ್ನಲಾಗಿದ್ದು, ಈ ಹಿಂದೆ ಗ್ರಾಮ ಪಂಚಾಯತಿ ಸದಸ್ಯರು ಬಿಲ್ ಕಲೆಕ್ಟರ್ ವಿರುದ್ದ ತಾಲೂಕ ಪಂಚಾಯತಿ ಅಧಿಕಾರಿಗಳಿಗೆ ದೂರ ನೀಡಿದ್ದರು. ತಾಲೂಕು ಪಂಚಾಯತಿ ಅಧಿಕಾರಿಗಳಿಂದಲೂ ಸಹಿತ ಯಾವುದೇ ಕ್ರಮವಿಲ್ಲ.
ಗ್ರಾಮ ಪಂಚಾಯತಿ ಸದಸ್ಯರು ದೂರು ನೀಡಿದರು ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಡೆಗೆ ಪಂಚಾಯತಿ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಅವರು ಕೂಡಲೇ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.