ನಮ್ಮ ಹೀರೋಗಳಿಗೆ ಪ್ಯಾನ್ ಇಂಡಿಯಾ ಎಂಬುದು ಸದ್ಯದ ಶೋಕಿ ಎಂದು ಹಂಸಲೇಖ ಖಾರವಾಗಿ ಉತ್ತರ ಕೊಟ್ಟಿದ್ದಾರೆ.
ಟ್ರೆಂಡ್ನಲ್ಲಿ ಕನ್ನಡದ ಸ್ಟಾರ್ ಹೀರೋಗಳು ಕೂಡ ಸಿಲುಕಿದ್ದಾರೆ. ಪ್ಯಾನ್ ಇಂಡಿಯಾ ಎಂಬ ಹುಚ್ಚು ಬಂದು ಕನ್ನಡದ ಸೂಪರ್ ಸ್ಟಾರ್ಗಳಿಗೆ ಕನ್ನಡದ ಬೇರುಗಳು ಕಟ್ ಆಗಿವೆ. ಕನ್ನಡದ ಜೊತೆ ಇದ್ದ ಕನೆಕ್ಷನ್ ಕಟ್ ಆಗಿದೆ. ಇವರೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಎಂಬುದು ಒಂದು ಭ್ರಮೆ. ದಕ್ಷಿಣದ ಸುಂದರವಾದ ನಾಯಕಿಯರು ಉತ್ತರ ಭಾರತಕ್ಕೆ ಹೋಗಿ 20 ವರ್ಷ ಬದುಕಬಹುದು ಅಷ್ಟೇ.
ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ!
ರಜನಿಕಾಂತ್, ಕಮಲ್ ಹಾಸನ್, ಮಮ್ಮುಟಿ, ಮೋಹನ್ ಲಾಲ್ ಬಾಂಬೆಗೆ ಹೋದರೆ 2 ವರ್ಷ ಇರೋಕೆ ಆಗಲ್ಲ. ನಮ್ಮ ಹೀರೋಗಳಿಗೆ ಪ್ಯಾನ್ ಇಂಡಿಯಾ ಎಂಬುದು ಸದ್ಯದ ಶೋಕಿ. ಒಂದು ಹನಿಮೂನ್ ಥರ. ಎಲ್ಲಿ ಸುತ್ತಿದ್ದರು ಕನ್ನಡಕ್ಕೆ ವಾಪಸ್ ಬರಲೇಬೇಕು. ಪ್ಯಾನ್ ಇಂಡಿಯಾ ಅಂತ ಹೋದರೆ ಸ್ವಲ್ಪ ವ್ಯಾಪಾರ ಆಗಬಹುದು. ನಟರ ದಾಡಿ, ಬಾಡಿ ಬೆಳೆಯುತ್ತೆ ಅಷ್ಟೇ. ಬೇರೆ ಏನೂ ಬೆಳೆಯಲ್ಲ ಎಂದರು.