ಕಾರ್ಗಿಲ್: ಪಾಕಿಸ್ತಾನವು ದುಸ್ಸಾಹಸ ನಡೆಸಿದಾಗಲೆಲ್ಲಾ ಸೋಲನ್ನು ಎದುರಿಸಿದೆ. ಅದು ಇತಿಹಾಸದಿಂದ ಯಾವುದೇ ಪಾಠಗಳನ್ನು ಕಲಿತಿಲ್ಲ. ಅದು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಕಾರ್ಗಿಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕ್ ವಿರುದ್ಧ ಕಿಡಿಕಾರಿದ್ದಾರೆ.
1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಈ ವೇಳೆ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಸೈನಿಕರು ಮಾಡಿದ ತ್ಯಾಗ ಅಮರ ಮತ್ತು ಕಾರ್ಗಿಲ್ ವಿಜಯ್ ದಿವಸ್ ರೂಪದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದರು.
Foot Care: ಪಾದದ ಅಡಿಯಲ್ಲಿ ಸುಡುವ ರೀತಿ ಆಗ್ತಿದ್ಯಾ..? ನಿವಾರಣೆಗೆ ಈ ಮನೆ ಮದ್ದು ಬೆಸ್ಟ್
ಇಂದು ಕಾರ್ಗಿಲ್ ವಿಜಯದ 25 ವರ್ಷಗಳಿಗೆ ಮಹಾನ್ ಭೂಮಿ ಲಡಾಖ್ ಸಾಕ್ಷಿಯಾಗಿದೆ. ದೇಶಕ್ಕಾಗಿ ಮಾಡಿದ ಅವರ ತ್ಯಾಗ ಎಂದಿಗೂ ಅಮರ ಎಂದು ಕಾರ್ಗಿಲ್ ವಿಜಯ್ ದಿವಸ್ ಹೇಳುತ್ತದೆ. ನಮ್ಮ ಸೇನೆಯ ವೀರ ಸೈನಿಕರಿಗೆ ಈ ದೇಶ ಸದಾ ಋಣಿಯಾಗಿರುತ್ತದೆ. ಹುತಾತ್ಮರಿಗೆ ದೇಶ ಆಭಾರಿಯಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾನು ನಮ್ಮ ಸೈನಿಕರ ನಡುವೆ ಒಬ್ಬ ಸಾಮಾನ್ಯ ದೇಶವಾಸಿಯಾಗಿದ್ದೆ ಎಂಬುದು ನನ್ನ ಅದೃಷ್ಟ” ಎಂದು ಮೋದಿ ಹೇಳಿದರು.