ಬೆಂಗಳೂರು:- ಬಿಜೆಪಿ- ಜೆಡಿಎಸ್, ಕಾಂಗ್ರೆಸ್ ಮಧ್ಯೆ ಪಾದಯಾತ್ರೆ ಪಾಲಿಟಿಕ್ಸ್ ಜೋರಾಗ್ತಿದೆ, ಮೈಸೂರು ಚಲೋ vs ಜನಾಂದೋಲನ ಹೋರಾಟದ ಟಾಕ್ ವಾರ್ ತಾರರಕ್ಕೇರ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಡಿಸಿಎಂ ಡಿಕೆಶಿ ಮಧ್ಯೆ ಆಣೆ-ಪ್ರಮಾಣದ ಪಾಲಿಟಿಕ್ಸ್ ಶುರುವಾಗಿದ್ದು ಸವಾಲಿನ ಯುದ್ಧಕ್ಕಿಳಿದಿದ್ದಾರೆ ಒಕ್ಕಲಿಗ ನಾಯಕರು. 3 ಪಕ್ಷದ ಅಧ್ಯಕ್ಷರುಗಳು ವಾಗ್ಯದ್ಧ ನಡೆಸ್ತಿದ್ರೆ ಆಕ್ರೋಶದ ಕಾವು ಜೋರಾಗ್ತಿದೆ, ಈ ಮಧ್ಯೆ ಕಾಂಗ್ರೆಸ್ ವರಿಷ್ಠರು ರಾಜ್ಯಕ್ಕೆ ಆಗಮಿಸಿದ್ದು ಸಚಿವರ ಮೌಲ್ಯಮಾಪನ ಮಾಡಿ ಕಿವಿಮಾತು ಹೇಳ್ತಿದ್ದಾರೆ….
CM Siddaramaiah On Wayanad: ದುರಂತಕ್ಕೀಡಾದ ವಯನಾಡ್ʼನಲ್ಲಿ 100 ಮನೆಗಳ ನಿರ್ಮಾಣ: ಸಿಎಂ ಘೋಷಣೆ
ರಾಜ್ಯದಲ್ಲೀಗ 3 ಪಕ್ಷಗಳಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ನದ್ದೇ ಸುದ್ದಿ, ಬಿಜೆಪಿ- ಜೆಡಿಎಸ್ ನಾಯಕರು 2ನೇದಿನದ ಮೈಸೂರು ಚಲೋ ಪಾದಯಾತ್ರೆ ಮಾಡ್ತಿದ್ರೆ. ಕಾಂಗ್ರೆಸ್ ನಾಯಕರು 3ನೇ ದಿನದ ಜನಾಂದೋಲನ ನಡೆಸ್ತಿದ್ದಾರೆ, ಮೈತ್ರಿಯ 2 ನೇ ದಿನದ ಚಲೋ ಬಿಡದಿಯಿಂದ ರಾಮನಗರದವರೆಗೆ ಸಾಗಿದ್ರೆ, ಕೈನ 3ನೇದಿನದ ಆಂದೋಲನ ಚನ್ನಪಟ್ಟಣದಲ್ಲಿ ನಡೆಯಿತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರುಗಳು ಪರಸ್ಪರ ವಾಗ್ಯುದ್ಧಕ್ಕಿಳಿದಿದ್ದಾರೆ..
ಪಾದಯಾತ್ರೆ ಹೋರಾಟದಲ್ಲಿ ಒಕ್ಕಲಿಗ ನಾಯಕರ ಟಾಕ್ ವಾರ್ ಜೋರಾಗಿದೆ ಆಣೆ- ಪ್ರಮಾಣ ನೈತಿಕತೆಯ ಪಾಲಿಟಿಕ್ಸ್ ಶುರುವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಡಿಸಿಎಂ ಡಿಕೆಶಿ ವಿರುದ್ಧ ಮತ್ತೊಮ್ಮೆ ತಿರುಗಿ ಬಿದ್ದಿದ್ದಾರೆ. ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ ಆಮೇಲೆ ನಿನ್ನದನ್ನು ಹೇಗೆ ಬಿಚ್ಚುತೀನಿ ಎಂದು ನೋಡುವಿಯಂತೆ. ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ನಿಮ್ಮದನ್ನು ಬಿಚ್ಚಲು ಹೋದರೆ ಪುಟಗಟ್ಟಲೆ ಇದೆ.
ನಾನು ಪ್ರಾಮಾಣಿಕ ಎಂದು ಅಜ್ಜಯ್ಯನ ಮೇಲೆ ಪ್ರಮಾಣ ಮಾಡು, ನಾನು ಪ್ರಮಾಣ ಮಾಡುತ್ತೇನೆ. ಡಿಕೆಶಿಗೆ ಅಜ್ಜಯ್ಯನ ಶಾಪ ಆರಂಭವಾಗಿದೆ ನಾನು ಯಾರಿಗೂ ದ್ರೋಹ ಮಾಡಿಲ್ಲ. ಮಾಡುವುದೂ ಇಲ್ಲ ಜನರ ಆಶೀರ್ವಾದವೇ ನನ್ನ ಬಲ, ಅದೇ ನನ್ನ ಬೆಳೆಸಿದೆ. ನಾನು ಯಾರಿಗೂ ಮೋಸ ಮಾಡಿಲ್ಲ ನಿನ್ನ ತರ ವಂಚನೆ ಮಾಡಿ ಭೂಮಿ ಖರೀದಿಸಿದ್ದಿದ್ರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಡಿಕೆಶಿಗೆ ಸವಾಲು ಹಾಕಿದ್ದಾರೆ ಕುಮಾರಸ್ವಾಮಿ..
ಇನ್ನು ಕುಮಾರಸ್ವಾಮಿ ಸವಾಲಿಗೆ ಡಿಸಿಎಂ ಡಿಕೆಶಿ ಠಕ್ಕರ್ ಕೊಟ್ಟಿದ್ದಾರೆ ಬಿಜೆಪಿ – ಜೆಡಿಎಸ್ ನವರು ಪಾಪವಿಮೋಚನಾ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಮಾಡಿರುವ ಎಲ್ಲಾ ಪಾಪಗಳನ್ನು ಕಳೆದುಕೊಳ್ಳಲು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕೋಸ್ಕರ, ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆ.
ಹುಟ್ಟಿದ ಕರುಗಳೆಲ್ಲ ಬಸವ ಆಗಲ್ಲ, ಅದೇ ರೀತಿ ಎಲ್ಲರೂ ರೈತನ ಮಗ ಆಗುವುದಿಲ್ಲ. ನಾನು ಕೃಷಿ ಜತೆಗೆ ಉದ್ಯಮ ಮಾಡಿದ್ದೇನೆ, ನೀವು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಂಪಾದಿಸಿದ್ದೀರಿ. ಕುಮಾರಸ್ವಾಮಿ ಹಿಡ್ ಅಂಡ್ ರನ್, ಬ್ಲಾಕ್ ಮೇಲರ್ ಕುಮಾರಸ್ವಾಮಿ ನವರಂಗಿ ಬಣ್ಣ ಬಯಲಾಗಬೇಕು. ಕುಮಾರಸ್ವಾಮಿ ಟೂರಿಂಗ್ ಟಾಕೀಸ್ ಮುಂದುವರಿಯಲಿ ಅಂತ ವ್ಯಂಗ್ಯವಾಡಿದ್ದಾರೆ ಡಿಕೆಶಿ…
ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ ಪಾದಯಾತ್ರೆ ನೋಡಿ ನಡುಗಿ ಹೋಗಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಪಕ್ಷಗಳ ಪ್ರಶ್ನೆಗಳಿಗೆ ಆಡಳಿತ ಪಕ್ಷ ಉತ್ತರಿಸದೇ ಅವರೇ ಪ್ರಶ್ನೆ ಕೇಳ್ತಿದ್ದಾರೆ. ಹಣ ಕೊಳ್ಳೆ ಹೊಡೆದುಕೊಂಡು ಲೂಟಿ ಹೊಡೆದು ನಮಗೇ ಪ್ರಶ್ನೆ ಕೇಳ್ತಿದ್ದಾರೆ, ಡಿಸಿಎಂಗೆ ಅಧಿಕಾರ, ಹಣದ ದರ್ಪ ಏರಿದೆ, ದುರಹಂಕಾರದಿಂದ ಮಾತಾಡ್ತಿದ್ದಾರೆ. ಇವರ ದುರಹಂಕಾರದ ನಡೆಯಿಂದ ಬಿಡದಿಯ ಟೊಯೋಟಾ ಕಂಪೆನಿಯೂ ಹೋಗುವ ಪರಿಸ್ಥಿತಿಯಲ್ಲಿದೆ, ಇವರ ಕಾಲದಲ್ಲಿ ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡ್ಕೊಳ್ತಿದ್ದಾರೆ ಅಂತ ಕಿಡಿಕಾರಿದ್ರು ವಿಜಯೇಂದ್ರ….
ಇನ್ನು ಈ ಮಧ್ಯೆ ಸಚಿವರ ಮೌಲ್ಯಮಾಪನ ಮಾಡಲು ಎಐಸಿಸಿ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ.
ವಾಲ್ಮೀಕಿ ಪ್ರಕರಣ ಸಂಬಂಧ ನಾಗೇಂದ್ರ ಬಂಧನವಾಗಿರುವ ಹಿನ್ನೆಲೆಯಲ್ಲಿ ಸಚಿವರ ಮೌಲ್ಯಮಾಪನ ಮಾಡ್ತಿದ್ದಾರೆ ವರಿಷ್ಟರು. ಕೆ.ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಸಚಿವರಿಗೆ ಪಾಠ ಮಾಡ್ತಿದ್ದು ಮುಂದೆ ಸಚಿವರು ಹೇಗೆ ಕಾರ್ಯನಿರ್ವಹಿಸಬೇಕು ಹಾಗೂ
ಸ್ವಚ್ಛ ಆಡಳಿತದ ಬಗ್ಗೆ ಕಿವಿಮಾತು ಹೇಳ್ತಿದ್ದಾರೆ ಸುರ್ಜೆವಾಲ, ವೇಣುಗೊಪಾಲ್….
ಒಟ್ನಲ್ಲಿ ಪಾದಯಾತ್ರೆ vs ಜನಾಂದೋಲನ ಪಾಲಿಟಿಕ್ಸ್ ಜೋರಾಗ್ತಿದ್ದು 3 ಪಕ್ಷದ ಅಧ್ಯಕ್ಷರುಗಳು ವಾಗ್ಯುದ್ಧಕ್ಕಿಳಿದಿದ್ದಾರೆ. ಅದ್ರಲ್ಲೂ ಡಿಸಿಎಂ ಡಿಕೆಶಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ನಡುವೆ ನಡೆಯುತ್ತಿರೊ ಆಣೆ ಪ್ರಮಾಣ, ಅಕ್ರಮ ಆಸ್ತಿ, ನೈತಿಕತೆಯ ವಾರ್ ಎಲ್ಲಿಗೆ ಹೋಗಿ ಮುಟ್ಟುತ್ತೆ ಎಂಬುದನ್ನು ಕಾದುನೋಡಬೇಕಿದೆ….