ಬೆಳಗಾವಿ: ರೈತರು (Farmers) ಶಿವಸ್ವರೂಪಿಗಳು, ದೇವರ ಸಮಾನ, ಅವರ ಹಣ ತಿಂದ್ರೆ ಪ್ಯಾರಾಲಿಸಿಸ್ (ಸ್ಟ್ರೋಕ್ ಅಥವಾ ಪಾರ್ಶ್ವವಾಯು) (Paralysis) ಬರುತ್ತೆ, ರೈತರ ಹಣ ತಿಂದ ಮಾಲೀಕರು ಉದ್ಧಾರ ಆಗಲ್ಲ. ಅವರಿಗೆ ಮೋಸ ಮಾಡಬೇಡಿ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ (Laxman Savadi) ಸದನದಲ್ಲಿ ಮನವಿ ಮಾಡಿದರು.
ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ ಬಿಜೆಪಿ ಧರಣಿಯನ್ನು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಖಂಡಿಸಿದರು. ಬಿಜೆಪಿ ಶಾಸಕರ (BJP MLAs) ವಿರುದ್ಧ ಕೆಂಡಾಮಂಡಲವಾದ ಲಕ್ಷ್ಮಣ್ ಸವದಿ ರೈತರ ಪರ ದನಿ ಎತ್ತಿದರು. ನಿಯಮ 69ರ ಅಡಿ ಕಬ್ಬು ಕಾರ್ಖಾನೆಗಳಲ್ಲಿ ಆಧುನಿಕ ತೂಕದ ಯಂತ್ರಗಳನ್ನು ಅಳವಡಿಸುವ,
Samantha: ಜೀನ್ಸ್’ನಲ್ಲಿ ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಲುಕ್ಸ್ ಕೊಟ್ಟ ಸಮಂತಾ..! ಫೋಟೋಸ್ ನೋಡಿ
ಬಗ್ಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಆರಂಭಿಸುತ್ತಿದ್ದಂತೆ ವಿಪಕ್ಷ ಶಾಸಕರು ಸದನದ ಬಾವಿಯಲ್ಲೇ ನಿಂತು ಧಿಕ್ಕಾರ ಕೂಗಿದರು. ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸವದಿ ನಡುವೆ ಮಾತಿನ ಚಕಮಕಿಯೂ ನಡೆಯಿತು. ಆಗ ಬಿಜೆಪಿ ಶಾಸಕರ ವಿರುದ್ಧ ಕಂಡಾಮಂಡಲವಾದ ಸವದಿ, ನೀವು ಕಬ್ಬು ಬೆಳೆಗಾರರ ವಿರೋಧಿಗಳು, ಉತ್ತರ ಕರ್ನಾಟಕದ ವಿರೋಧಿಗಳು, ಹೊರಗೆ ಹೋದರೆ ಜನ ಕಬ್ಬು ತಗೊಂಡು ನಿಮಗೆ ಹೊಡೆಯುತ್ತಾರೆ ಎಂದು ಎಚ್ಚರಿಸಿದರು.