ಬಳ್ಳಾರಿ:- ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಬಳ್ಳಾರಿ ಬಿಜೆಪಿ ಸಂಸದರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಎನ್ಎಸ್ಯುಐ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ ನಡೆದಿದ್ದು, ಕೂಡಲೇ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ಜೊತೆಗೆ ವಾಗ್ವಾದ ನಡೆದಿದೆ.
ಕಚೇರಿ ಒಳ ನುಗ್ಗಲು ಕೈ ಕಾರ್ಯಕರ್ತರು ಯತ್ನಿಸುತ್ತಿದ್ದು, ಹೊರ ಹಾಕಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಬರದ ಹಣ ರಾಜ್ಯಕ್ಕೆ ನೀಡ್ತಿಲ್ಲ, ತೆರಿಗೆ ಹಣ ನೀಡಲು ವಿಳಂಬ ಮಾಡ್ತಿರೋ ಕೇಂದ್ರ ಸರ್ಕಾರದ ವಿರುದ್ಧ ಈ ವೇಳೆ ಧಿಕ್ಕಾರ ಕೂಗಿದ್ದಾರೆ.
ರಾಜ್ಯದ 26 ನಾಲಾಯಕ ಸಂಸದರ ರಾಜ್ಯಕ್ಕೇನು ಉಪಯೋಗವಿಲ್ಲ ಎಂದು ಘೋಷಣೆ ಕೂಗಿದ್ದಾರೆ. ಬಳ್ಳಾರಿ ಸಂಸದ ದೇವೇಂದ್ರಪ್ಪ ನಾಪತ್ತೆಯಾಗಿದ್ದಾರೆ, ಬಳ್ಳಾರಿಯಲ್ಲಿ ಅವರನ್ನು ನೋಡಿಯೇ ಇಲ್ಲ, ಬಳ್ಳಾರಿ ಸಂಸದ ನಾಪತ್ತೆಯಾಗಿರೋ ಪ್ಲೇಕಾರ್ಡ್ ಹಿಡಿದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.
ಮೂರು ವರ್ಷದಿಂದ ಬಳ್ಳಾರಿಗೆ ಸಂಸದ ದೇವೇಂದ್ರಪ್ಪ ಬಂದಿಲ್ಲ,. ದೇವೇಂದ್ರಪ್ಪ ಕಚೇರಿಯೇ ಧೂಳು ಹಿಡಿದು ಹೋಗಿದೆ, ಇಂತಹವರಿಂದ ರಾಜ್ಯಕ್ಕೆ ಜಿಲ್ಲೆಗೆ ಯಾವುದೇ ಉಪಯೋಗವಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ.