ರಾಮನಗರ:- ಹತ್ತು ವರ್ಷಗಳ ಕಾಲ ನಮ್ಮ ಸರ್ಕಾರ ಇದ್ದೇ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಯಾರೂ ಬಿಜೆಪಿ, ದಳ ಅಂತ ಯೋಚನೆ ಮಾಡುತ್ತಿದ್ದೀರೋ ಅದನ್ನು ಮರೆತುಬಿಡಿ. ವಯಸ್ಸು ಮುಗಿದು ಹೋಗುತ್ತದೆ, ಅವಕಾಶ ಸಿಕ್ಕಿದೆ. ನೀವೆಲ್ಲಾ ಸಹಾಯ ಮಾಡಬೇಕು ಎಂದರು
ಮರ ಹೊಸ ಚಿಗುರಿಗೆ ಕಾಯುತ್ತಿರುತ್ತದೆ. ನೀವು ಕೂಡ ಮುಂದಿನ ದಿನಗಳಲ್ಲಿ ಕಾದು ನೋಡಿ. ಸರ್ಕಾರ ಗಟ್ಟಿಯಾಗಿದೆ. ಸರ್ಕಾರ ನಿಮ್ಮ ಸೇವೆ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೇ ಕೊಟ್ಟರೂ ನೀವು ಅವರನ್ನು ಗೆಲ್ಲಿಸಬೇಕು. ಕೈ ಬಲಪಡಿಸಬೇಕು ಎಂದು ಸಮಾವೇಶದಲ್ಲಿ ಮತಯಾಚನೆ ಮಾಡಿದರು
ಎಣ್ಣೆ ಬೆಲೆ ಜಾಸ್ತಿ ಆಗಿದೆ ಎಂದು ಜನರ ಸಹಾಯಕ್ಕೆ ಮುಂದಾದೆವು. ನಾನು, ಸಿದ್ದರಾಮಯ್ಯ ಸಹಿ ಹಾಕಿ ನಿಮ್ಮ ಮನೆಗೆ ಗ್ಯಾರಂಟಿ ಚೆಕ್ ತಲುಪಿಸಿದ್ದೆವು. ಆ ಪೈಕಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಹೇಳಿದರು
ಅಂಬೇಡ್ಕರ್ ಯಾವ ರೀತಿ ಸಂವಿಧಾನ ಕೊಟ್ಟಿದ್ದಾರೋ ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಕ್ಕೆ 371 ಜೆ ಕೊಟ್ರು. ನಿಮ್ಮ ಬದುಕಿನಲ್ಲಿ ಬದಲಾವಣೆ ಮಾಡಿದ್ದಾರೆ. ಇದಕ್ಕೆ ಉಪಕಾರ ಸ್ಮರಣೆ ಇರಬೇಕು. ನೀವೆಲ್ಲಾ ಫಲಾನುಭವಿಗಳಾಗಿ ಸಂತೋಷದಿಂದ ಇದ್ದೀರಿ ಎಂದು ಭಾವಿಸಿದ್ದೇನೆ ಎಂದರು